ರೈತರ ಬಡವರ ಏಳ್ಗೆಗಾಗಿ ಸಹಕಾರಿ ಸಂಸ್ಥೆಗಳು ಶ್ರಮಿಸಬೇಕು
ಲೋಕದರ್ಶನ ವರದಿ
ಯರಗಟ್ಟಿ 7: ಸಹಕಾರಿ ಸಂಸ್ಥೆಗಳು ರೈತರ, ಬಡವರ, ಹಿಂದುಳಿದವರ, ಸಣ್ಣ ವ್ಯಾಪಾರಸ್ಥರ ಆಥರ್ಿಕವಾಗಿ ಸಬಲೀಕರಣಬಾಗುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಶಾಸಕ ಆನಂದ ಮಾಮನಿ ಅಭಿಪ್ರಾಯಪಟ್ಟರು.
ಇಲ್ಲಿನ ಬೆಣ್ಣಿ ಕಾಂಪ್ಲೆಕ್ಸ್ನಲ್ಲಿ ಮುಧೋಳ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ನಿ, 35 ನೇ ಶಾಖೆ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಅದ್ಯಕ್ಷ ಹನಮಂತ ನಿರಾಣಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡುತ್ತಾ ನಿರಾಣಿ ಗ್ರೂಪ್ ಸಂಸ್ಥೆಯು ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು ಈ ಭಾಗದ ರೈತರು ನಿರಾಣಿ ಸಕ್ಕರೆ ಕಾಖರ್ಾನೆಗೆ ಹೆಚ್ಚಾಗಿ ಕಬ್ಬು ಕಳಿಸುತ್ತಿದ್ದು ರೈತರ ಕಬ್ಬಿನ ಬಿಲ್ಲ ಸರಳವಾಗಿ ತಲುಪುವ ಉದ್ದೇಶದಿಂದ ಈ ಭಾಗದಲ್ಲಿ ಶಾಖೆಗಳನ್ನು ತೆರೆಯಲಾಗುತ್ತಿದೆ. ಈಗಾಗಲೇ ಮೂವತ್ತೇಳು ಶಾಖೆಯನ್ನು ಹೊಂದಿರುವ ನಮ್ಮ ಸಂಸ್ಥೆ ಒಂದು ನೂರು ಶಾಖೆಗಳನ್ನು ತೆರೆಯುವ ಗುರಿ ಹೊಂದಿದೆ, ನಮ್ಮ ಸಂಸ್ಥೆ ನೂರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಿಕೊಟ್ಟಿದೆ. ಐದನೂರ ಕೋಟಿಗೂ ಹೆಚ್ಚು ಠೇವು ಹೊಂದಿ ನಾಲ್ಕು ನೂರಕ್ಕೂ ಹೆಚ್ಚು ಸಾಲ ನೀಡಿದ್ದು ಸುಮಾರು ಏಳು ಸಾವಿರ ಕೋಟಿ ವಹಿವಾಟು ನಡೆಸುತ್ತಿದೆ ಎಂದರು.
ಬಾಗೀಜಿಕೊಪ್ಪ ಡಾ.ಶಿವಲಿಂಗ ಶಿವಾಚಾರ್ಯ ಶ್ರೀಗಳು ಸಾನಿದ್ಯ ವಹಿಸಿ ಇಲ್ಲಿನ ಜನರು ವಿಜಯ ಸೌಹಾರ್ದ ಸಂಸ್ಥೆಯ ಪ್ರಯೋಜನ ಪಡೆದು ವ್ಯಾಪಾರ ವಹಿವಾಟು ಮಾಡಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಆಶಿರ್ವಚನ ನೀಡಿದರು.
ಸಂಸ್ಥೆಯ ಜಿ.ಎಂ ಜಿ.ಎಂ,ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಪಿಎಮ್ಸಿ ಮಾಜಿ ಅದ್ಯಕ್ಷ ಬಸಯ್ಯ ಹಿರೇಮಠ, ಬಿ.ಎಮ್.ರಾಯರ ಮಾತನಾಡಿದರು, ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ, ತಾ.ಪಂ.ಅದ್ಯಕ್ಷ ವಿನಯಕುಮಾರ ದೇಸಾಯಿ, ಡಾ.ಕೆ.ವ್ಹಿ.ಪಾಟೀಲ, ಗ್ರಾ.ಪಂ.ಅದ್ಯಕ್ಷೆ ಕಸ್ತೂರಿ ಕಡೆಮನಿ, ಪರ್ವತಗೌಡ ಪಾಟೀಲ, ಸೋಮಪ್ಪ ಕಳ್ಳಿಗುದ್ದಿ, ವ್ಹಿ.ಜಿ.ದೇವರಡ್ಡಿ, ಈರಪ್ಪ ಚಳಕೊಪ್ಪ, ಸಲಹಾ ಸಮಿತಿ ಸದಸ್ಯರು ಮುಂತಾದವರು ಪಾಲ್ಗೊಂಡಿದ್ದರು. ಶಿವಾನಂದ ಕರ್ಜಗಿಮಠ ನಿರೂಪಿಸಿ ವಂದಿಸಿದರು
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 