ನಜೀರ್ ಅಹ್ಮದ್ ಹೇಳಿಕೆಗೆ ಖಂಡನೆ
Condemnation of Nazir Ahmed's statement
ನಜೀರ್ ಅಹ್ಮದ್ ಹೇಳಿಕೆಗೆ ಖಂಡನೆ
ಸದನದ ಕಲಾಪದ ವೇಳೆ ಕಾಂಗ್ರೇಸ್ ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಯಾಗಿರುವ ನಜೀರ್ ಅಹ್ಮದ್ ದೇಶದ ಸಂವಿಧಾನಾತ್ಮಕ ಉನ್ನತ ಹುದ್ದೆಯಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರನ್ನು ‘ರಾಷ್ಟ್ರದ್ರೋಹಿ, ದೇಶದ್ರೋಹಿ’ ಎಂದು ನಿಂದನಾತ್ಮಕವಾಗಿ ಅವಹೇಳನ ಮಾಡಿರುವುದನ್ನು ಖಂಡಿಸಿತ್ತೇನೆ ಎಂದು ಬಿಜೆಪಿ ರಾಜ್ಯ ಸಂಚಾಲಕರು, ವ್ಯಾಪಾರ - ವಾಣಿಜ್ಯ ಪ್ರಕೋಷ್ಠ, ಕರ್ನಾಟಕದ ವಿಜಯಕುಮಾರ ಕುಡಿಗನೂರ ಹೇಳಿದರು.
ಮೆಲ್ಮನೆಯಲ್ಲಿ ಬುದ್ಧಿಜೀವಿಗಳ ಕೂಟ ಅದು, ಈ ಒಐಅ ಗೆ ನಾಚಿಕೆಯಾಗ್ಬೇಕು, ಈ ದೇಶದ ಪ್ರಧಾನಮಂತ್ರಿಗಳನ್ನ ಇಡೀ ದೇಶ ಹಾಗು ಪ್ರಪಂಚದ ಕೆಲವು ಮುಸ್ಲಿಂ ರಾಷ್ಟ್ರಗಳು ಪ್ರಶಂಸೆ ಮಾಡುತ್ತಿರುವಾಗ ಹಾಗು ಬಲುಚಿಸ್ತಾನ್ ದವರು ನರೇಂದ್ರ ಮೋದಿಜಿ ರಂತ ವ್ಯಕ್ತಿ ನಮ್ಮ ದೇಶಕ್ಕೂ ಬೇಕು ಅನ್ನುವಾಗ, ಹಿಂತಾ ನಜಿರ್ ಅಹ್ಮದ್ ಬಾಯಿಚಪಲಕ್ಕೆ ಬಾಯಿಗೆ ಬಂದಂಗೆ ಮಾತಾಡಿ, ಅಧಿವೇಶನದ ಮಹತ್ವದ ಸಮಯ ಸಂಪೂರ್ಣ ಹಾಳುಮಾಡಿ, ಇವರನ್ನು ಪರಿಷತ್ ಸದಸ್ಯತ್ವ ದಿಂದ ಸರ್ಕಾರ ಕೈಬಿಡಬೇಕು.. ಮಾತಾಡೋದೆಲ್ಲ ಮಾತಾಡಿ ನಂತರ ಕ್ಷಮೆ ಕೇಳಲು ಮೀನಾ ಮೆಶ್ ಮಾಡುತ್ತಿರುವದು ಸರಿಯೇ ? ಮೊದಲು ಬಾಯಿಗೆ ಬಂದಂಗೆ ಅನ್ನೋದು, ಆನಂತರ ಕ್ಷಮೆ ಕೇಳೋದು ಇದು ನಾಟಕ ಯಾರಿಗೆ ತೋರಸ್ತೀರಾ.. ನಾನು ಈಗ ನಜಿರ್ ಅಹಮದ್ ಅವರಿಗೆ ನಾನು ನಿಮ್ಮಪ್ಪ ಉಗ್ರವಾದಿ ಅನ್ನುತ್ತೇನೆ, ಆಮೇಲೆ ಪ್ರಚಾರ ತೊಗೊಂಡು ಕ್ಷಮಿಸಿ ಎನ್ನುತ್ತೇನೆ ಎಲ್ಲಾ ಸರಿಹೋಗುತ್ತಾ.. ಹಿಂತಾ ದೇಶದ್ರೋಹಿಯ ಹಿಂದೆ ಪಾಕಿಸ್ತಾನ ಕೈವಾಡ ಇದೆಯಾ ಎಂದು ಸಂಶಯ ಬರುತ್ತಿದೆ ಇದು ತನಿಖೆ ಯಾಗಬೇಕು ವಿಜಯಕುಮಾರ ಕುಡಿಗನೂರ ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 