ಗ್ರಾಮ ಪಂಚಾಯತ್ಗಳಿಗೆ ಕೇಂದ್ರ ಮಾನಿಟರಿಂಗ್ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ
Central monitoring officers visit and inspect Gram Panchayats
ಬಳ್ಳಾರಿ 21: ಕುರುಗೋಡು ತಾಲ್ಲೂಕಿನ ಕೋಳೂರು ಹಾಗೂ ಓರ್ವಾಯಿ ಗ್ರಾಮ ಪಂಚಾಯತ್ ಗಳಿಗೆ ಕೇಂದ್ರ ಮಾನಿಟರಿಂಗ್ (ಎನ್ಎಲ್ಎಂ) ಅಧಿಕಾರಿಗಳಾದ ಡಾ.ದಯಾಕರ ರೆಡ್ಡಿ ಹಾಗೂ ಚೂಡಾಮಣಿ ರೆಡ್ಡಿ ತಂಡವು ಇತ್ತೀಚೆಗೆ ಭೇಟಿ ನೀಡಿ ವಿವಿಧ ಕಾಮಗಾರಿ ಮತ್ತು ಯೋಜನೆಗಳ ಬಗ್ಗೆ ಪರೀಶೀಲನೆ ನಡೆಸಿದರು.
ಕೋಳೂರು ಗ್ರಾಪಂ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಕಳೆದ 3 ವರ್ಷಗಳಲ್ಲಿ ಸಾಮಾಗ್ರಿ ಆಧಾರಿತ ಕಾಮಗಾರಿಗಳಾದ ಗ್ರಾಮ ಪಂಚಾಯತಿ ಕಟ್ಟಡ, ಎನ್ಆರ್ಎಲ್ಎನ್ ಶೇಡ್, ಮೆಟಲ್ ರಸ್ತೆ, ದನಗಳ ಶೆಡ್ಗಳ ಕಾಮಗಾರಿಗಳನ್ನು ಪರೀಶೀಲಿಸಿದರು.ಪ್ರಧಾನಮಂತ್ರಿ ಅವಾಜ್ ಯೋಜನೆಯಡಿ ನಿರ್ಮಾಣ ಹಂತದ ಮನೆಗಳು, ಮನರೇಗಾ ಯೋಜನೆಯಡಿ ಕಾಲುವೆ ಹೂಳು ತೆಗೆಯುವ ಕಾಮಗಾರಿ, ಸಾಮಾಜಿಕ ಅರಣ್ಯ ವಲಯದ ಮನರೇಗಾ ಯೋಜನೆಯಡಿ ಕಳೆದ ವರ್ಷ ಪೂರ್ಣಗೊಂಡ ಕಾಮಗಾರಿ, ತೋಟಗಾರಿಕೆ ಇಲಾಖೆಯ ಮನರೇಗಾ ಯೋಜನೆಯಡಿ ವೈಯಕ್ತಿಕ ದಾಳಿಂಬೆ ಕಾಮಗಾರಿ, ಪ್ರಧಾನ ಮಂತ್ರಿ ಸಡಕ್ ಯೋಜನೆಯಡಿ ಮದಿರೆ ಗ್ರಾಮದಿಂದ ವದ್ದಟ್ಟಿ ಗ್ರಾಮದವರೆಗೆ ಮುಖ್ಯ ರಸ್ತೆಯವರೆಗೆ ನಿರ್ಮಾಣ ಮಾಡಲಾಗಿರುವ ಡಾಂಬಾರ್ ರಸ್ತೆಗಳು ಸೇರಿದಂತೆ ಮನರೇಗಾ ಯೋಜನೆಯಡಿ 7 ವಹಿ ಹಾಗೂ ಇನ್ನೀತರ ಸ್ಥಳಗಳನ್ನು ಪರೀಶೀಲಿಸಿದರು.
ಬಳಿಕ ಕೂಲಿಕಾರರು ಮತ್ತು ಫಲಾನುಭವಿಗಳ ಜೊತೆಗೆ ಚರ್ಚಿಸಿ ಸಂವಾದ ನಡೆಸಿದರು. ಗ್ರಾಮ ಲೆಕ್ಕಾಧಿಕಾರಿಗಳ ಜೊತೆಗೆ ಸಂವಾದ ನಂತರ ಗ್ರಾಮದ ವಿಶೇಷ ಚೇತನರು, ವೃದ್ಧರು ಹಾಗೂ ವಿಧವೆಯರ ಪಿಂಚಣಿ ಕುರಿತು ಅವರನ್ನು ನೇರವಾಗಿ ಕೇಳುವುದರ ಮೂಲಕ ಮಾತುಕತೆ ನಡೆಸಿದರು.ಎನ್ಆರ್ಎಲ್ಎನ್ ಸ್ವಸಹಾಯ ಸಂಘದ ಕುರಿತು ಹಾಗೂ ಸ್ವಸಹಾಯ ಸಂಘದ ಕಾರ್ಯಚಟುವಟಿಕೆಗಳ ಕುರಿತು ಸಂಘದ ಪ್ರತಿನಿಧಿಗಳ ಜೊತೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಕುರುಗೋಡು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ವಿ.ನಿರ್ಮಲ, ತಾಪಂ ಸಹಾಯಕ ನಿರ್ದೇಶಕ ಪಿ.ಶಿವರಾಮರೆಡ್ಡಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಜುಭೇದ, ತಿಮ್ಮಪ್ಪ, ಗ್ರಾಮ ಲೆಕ್ಕಾಧಿಕಾರಿ ಮಾರುತಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ರಾಘವೇಂದ್ರ, ಕಿರಣ್, ಸಾಮಾಜಿಕ ಅರಣ್ಯ ಅಧಿಕಾರಿ ಸಿರಾ ಬಡೀಗಿ, ಕುರುಗೋಡು ತಾಪಂ ತಾಂತ್ರಿಕ ಐಇಸಿ ಸಂಯೋಜಕ ಚಂದ್ರಶೇಖರ, ತಾಂತ್ರಿಕ ಸಹಾಯಕರಾದ ಯರಿ್ರಸ್ವಾಮಿ, ಚೆಲ್ಲಾ ಲೋಕೆಶ್ ಸೇರಿದಂತೆ ಗ್ರಾಪಂ ಸಿಬ್ಬಂದಿಗಳು ಹಾಗೂ ಇತರರು ಹಾಜರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 