ಕೊಪ್ಪಳದಲ್ಲಿ ಬೆಳಗಾವಿ ಹೈದರಾಬಾದ್ ರೈಲಿಗೆ ಸ್ವಾಗತಿಸಿ ಸಿಹಿ ಹಂಚಿ ಸಂಭ್ರಮ
Celebrations in Koppal to welcome Belgaum-Hyderabad train, distribute sweets
ಕೊಪ್ಪಳ 18: ನಗರದ ರೈಲ್ವೆ ನಿಲ್ದಾಣಕ್ಕೆ ಶುಕ್ರವಾರ ಸಂಜೆ ಆಗಮಿಸಿದ ಬೆಳಗಾವಿ ಹೈದರಾಬಾದ್ ರೈಲಿಗೆ ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸ್ವಾಗತಿಸಿ ರೈಲಿನ ಚಾಲಕರಿಗೆ ಹಾಗೂ ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎ.ಗಫಾರ್ ಮಾತನಾಡಿ ಬೆಳಗಾವಿ ಹೈದರಾಬಾದ್ ರೈಲು ಕೋವಿಡ್ ಕಾಲದಿಂದ ಸ್ಥಗಿತಗೊಳಿಸಲಾಗಿತ್ತು. ಪುನಃಪ್ರಾರಂಭಿಸಲು ನಮ್ಮ ಸಂಘಟನೆಯಿಂದ ಪದೇಪದೇ ಮನವಿ ಸಲ್ಲಿಸಲಾಗಿತ್ತು. ಈ ಮಾರ್ಗದ ಜಿಲ್ಲೆಗಳಿಂದ ಬಹುಬೇಡಿಕೆಯಾಗಿದ್ದ ಬೆಳಗಾವಿ ಹೈದರಾಬಾದ್ ರೈಲು ಪುನಃ ಪ್ರಾರಂಭಿಸಿದವರು ಸ್ವಾಗತಾರ್ಹ.ಭಾರತದಲ್ಲಿ ರೈಲ್ವೆಗಳು ಏಪ್ರಿಲ್ 16, 1853 ರಂದು ಬಾಂಬೆ (ಈಗ ಮುಂಬೈ) ಯಿಂದ ಥಾಣೆ ವರೆಗೆ ಮೊದಲ ಪ್ರಯಾಣಿಕ ರೈಲು ಓಡಿದ್ದು. ಕಳೆದ 173 ವರ್ಷಗಳಿಂದ ಆಧುನೀಕರಣಗೊಳ್ಳುತ್ತ ಬುಲೆಟ್ ರೈಲಿನ ಹಂತ ತಲುಪಿದೆ ಎಂದು ವಿವರಿಸಿದರು. ರೈಲ್ವೆ ಹೋರಾಟ ಸಮಿತಿಯ ಮುಖಂಡ ಚನ್ನಬಸಪ್ಪ ಅಪ್ಪಣವರ್ ಮಾತನಾಡಿ ಕೊಪ್ಪಳ ಮೂಲಕ ಬೆಂಗಳೂರಿಗೆ ಹೆಚ್ಚಿನ ರೈಲುಗಳನ್ನು ಓಡಿಸುವುದು ಸೇರಿದಂತೆ ಬೆಳಗಾವಿ ಹೈದರಾಬಾದ್ ರೈಲು ಪುನಃ ಪ್ರಾರಂಭಿಸಲು ಒತ್ತಾಯಿಸಲಾಗಿತ್ತು ಇಂದು ಈ ರೈಲಿನ ಬೇಡಿಕೆ ಈಡೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು. ರೈಲ್ವೆ ಹೋರಾಟ ಸಮಿತಿಯ ಮುಖಂಡರಾದ ಬಸವರಾಜ್ ಶೀಲವಂತರ್.ಮಖಬೂಲ್ ರಾಯಚೂರು.ಮಹಾಂತೇಶ ಕೊತಬಾಳ. ಹಂಚಾಳಪ್ಪ ಇಟಗಿ ಹ್ಯಾಟಿ ಮುಂಡರಗಿ. ಶಿವಪ್ಪ ಹಡಪದ್. ಮೈಲಾರ್ಪ ಇಟಗಿ ಹ್ಯಾಟಿ ಮುಂಡರಗಿ ಮುಂತಾದವರು ಬೆಳಗಾವಿ ಹೈದರಾಬಾದ್ ರೈಲನ್ನು ಸ್ವಾಗತಿಸಿ ಸಿಹಿ ಹಂಚಿ ಸಂಭ್ರಮದಲ್ಲಿ ಭಾಗಿಯಾಗಿದ್ದರು
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 