ಕಂಕಣ ಸೂರ್ಯಗ್ರಹಣ : ನೋವು ತೋಡಿಕೊಂಡ ಪ್ರಧಾನಿ
ನವದೆಹಲಿ, ಡಿ 26 ವಿಶ್ವದ ನಾನಾಕಡೆ ಹಲವಡೆ ಗುರುವಾರ ಬೆಳಗ್ಗೆ ಕಂಕಣ
ಸೂರ್ಯಗ್ರಹಣ ಗೋಚರಿಸಿದೆ, ಆದರೆ ಗ್ರಹಣವನ್ನು ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನೋವು, ಅಳಲು
ತೋಡಿಕೊಂಡಿದ್ದಾರೆ. ಆಸ್ಟ್ರೇಲಿಯಾ,ಸೌದಿ,
ಅಬುದಾಬಿ, ಕತಾರ್ , ಫಿಲಿಪ್ಪೆನ್ಸ್ , ಚೀನಾ, ಇಂಡೋನೇಷ್ಯಾ, ಸೋಮಾಲಿಯಾ, ಶ್ರೀಲಂಕಾ, ಜಿಂಬಾಬ್ವೆ,
ಪೊಲೆಂಡ್, ಬಾಂಗ್ಲಾದೇಶ, ಮಲೇಷ್ಯಾ, ಭೂತಾನ್ , ಅಫ್ಘಾನಿಸ್ತಾನ, ಮಾರಿಷಸ್, ಸುಮಾತ್ರ, ಬೆಲಾರಸ್ ಮತ್ತಿತರ
ರಾಷ್ಟ್ರಗಳಲ್ಲೂ ಗ್ರಹಣ ಗೋಚರಿಸಿದೆ.ದೇಶದ ಕೊಚ್ಚಿ,
ಕಾಸರಗೋಡು, ತಿರುವನಂತಪುರ, ಹರಿದ್ವಾರ ಚಂಡಿಗಡ, ಚೆನ್ನೈ, ಅಹ್ಮದಾಬಾದ್, ಅಜ್ಮೀರ್, ಭುವನೇಶ್ವರ್, ಮುಂಬೈನಲ್ಲೂ ಸೂರ್ಯಗ್ರಹಣ ಕಾಣಿಸಿದೆ..ದೆಹಲಿ ಮತ್ತು
ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣದ ಕಾರಣದಿಂದಾಗಿ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಅಡ್ಡಿಯಾಗಿತ್ತು. ಸೂರ್ಯಗ್ರಹಣ ಆರಂಭದಲ್ಲಿ ಕೇರಳ, ತಮಿಳುನಾಡು,
ಕರ್ನಾಟಕದ ಕೆಲವು ನಗರಗಳಲ್ಲಿ ಗೋಚರಿಸಿತು.ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಂಕಣ ಸೂರ್ಯಗ್ರಹಣ
ವೀಕ್ಷಿಸಿದರು. " ಭಾರತದ ಎಲ್ಲರಂತೆ ನಾನು ಕೂಡಾ ಗ್ರಹಣ ವೀಕ್ಷಿಸಲು ಉತ್ಸುಕನಾಗಿದ್ದೆ. ದುರದೃಷ್ಟವಶಾತ್,
ಮೋಡದ ಕವಿದ ವಾತಾವರಣದಿಂದ ಸೂರ್ಯಗ್ರಹಣ ಸರಿಯಾಗಿ
ನೋಡಲು ಸಾಧ್ಯವಾಗಲಿಲ್ಲ ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಬೇರೆ ಪ್ರದೇಶಗಳ ಗ್ರಹಣದ ನೇರ ಪ್ರಸಾರವನ್ನು ನೋಡಿ,
ಖಗೋಳ ಶಾಸ್ತ್ರಜ್ಞರೊಂದಿಗೆ ಇದರ ಬಗ್ಗೆ ಮಾಹಿತಿ ಪಡೆದಿರುವುದಾಗಿ ಪ್ರಧಾನಿ
ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 