ಬಳ್ಳಾರಿ: ಗೃಹಮಂಡಳಿ ಮನೆ ಬೆಲೆ ಬಾಳುವ ವಸ್ತುಗಳ ಕಳ್ಳತನ
ಲೋಕದರ್ಶನ ವರದಿ
ಬಳ್ಳಾರಿ 07: ನಗರದ ಹೊರವಲಯದಲ್ಲಿ ನಿಮರ್ಿಸಿರುವ ಕರ್ನಾಟಕ ಗೃಹ ಮಂಡಳಿಯ ಮಾದರಿಯ 50 ಮನೆಗಳ ಪೈಕಿ 5 ಮನೆಯಲ್ಲಿ ಕಳ್ಳತನ ನಡೆದಿರುವ ಗಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ಆಂಧ್ರಾಳ ಹತ್ತಿರ ಕರ್ನಾಟಕ ಗೃಹಮಂಡಳಿ ನಿಮರ್ಾಣ ಮಾಡಿರುವ ಮಾದರಿಯ 50 ಮನೆಗಳ ಪೈಕಿ 5 ಮನಗಳ ಕಿಡಕಿ ಗ್ರೀಲ್ ಮುರಿದು ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ದೋಚಿದ್ದಾರೆ.
ಜೊತೆಗೆ ಮನೆಯಲ್ಲಿರುವ ಪ್ಲಮ್ಮಿಂಗ್ ವಸ್ತುಗಳನ್ನು ದ್ವಂಸ ಮಾಡಿದ್ದಾರೆ. ಸರಿ ಸುಮಾರು 2 ಲಕ್ಷ ರೂ ಮೆಲ್ಮಟ್ಟ ವಸ್ತುಗಳ ಕಳ್ಳತನವಾಗಿದೆ. ಈ ಗಟನೆ ಸೋಮುವಾರ ರಾತ್ರಿ ವೇಳೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಇತ್ತೀಚಿನ ದಿನದಲ್ಲಿ ಗೃಹಮಂಡಳಿ ಸಾರ್ವಜನಿಕರಿಗೋಷ್ಕರ ನಿವಾಸಿಗಳ ಪ್ಲಾಟ್ ಗಳನ್ನು ನಿಮರ್ಿಸಿದೆ. ಮನೆಗಳು ಮಾರಾಟವಾಗಿದ್ದರೂ ಮೂಲಬೂತ ಸೌಕರ್ಯ ಒದಗಿಸಲು ಗೃಹಮಂಡಳಿ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಮನೆ ಖರೀದಿ ಮಾಡಿದ ಗ್ರಾಹಕರು ವಾಸಮಾಡಲು ಸಾದ್ಯವಾಗದ ಕಾರಣದಿಂದಾಗಿ ಯಾರೂ ಮನೆಗಳಲ್ಲಿ ಬರುತ್ತಿಲ್ಲ. ಅದಕ್ಕಾಗಿ ಈ ಪ್ರದೇಶದಲ್ಲಿ ಸೂಕ್ತ ರೀತಿಯ ಭದ್ರತೆ ಇಲ್ಲದ ಕಾರಣದಿಂದ ಇಂತಹ ಅವಗಡಗಳು ನಡೆಯುತ್ತಿವೆ. ಈಗಲಾದರೂ ಗೃಹಮಂಡಳಿಯ ಅಧಿಕಾರಿಗಳು ಇತ್ತಕಡೆ ಎಚ್ಚೆತ್ತುಕೊಂಡು ಭದ್ರತೆ ಕಲ್ಪಿಸುವ ಮೂಲಕ ಅಲ್ಲಿಯ ನಿವಾಸಿಗಳಿಗೆ ಅಭಯವನ್ನು ನಿಡುತ್ತಾರಾ ಎಂದು ಜನರು ಆಶಿಸುತ್ತಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 