ನೆರೆ ಸಂತ್ರಸ್ತರ ಮನೆಗಳ ನಿರ್ಮಾಣ ಕಾರ್ಯ ವಾರದಲ್ಲಿ ಆರಂಭಿಸಿ

ಹಾವೇರಿ: ನೆರೆ ಹಾವಳಿಗೆ ತುತ್ತಾಗಿ ಪೂರ್ಣವಾಗಿ ಮನೆಕಳೆದುಕೊಂಡಿರುವ ಸಂತ್ರಸ್ತರ ಎಲ್ಲ ಮನೆಗಳು ನಿಮರ್ಾಣ ಕಾರ್ಯ ಒಂದು ವಾರದೊಳಗೆ ಆರಂಭಿಸಲು ಜಿಲ್ಲೆಯ ತಹಶೀಲ್ದಾರಗಳಿಗೆ ಕನರ್ಾಟಕ ಸಕರ್ಾರದ ವಸತಿ ಇಲಾಖೆ ಕಾರ್ಯದಶರ್ಿ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳಾದ ಮನೋಜ್ಕುಮಾರ್ ಮೀನಾ ಅವರು ಖಡಕ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅತಿವೃಷ್ಟಿ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿ ಕುರಿತು ಪರಿಶೀಲನೆ ನಡೆಸಿದ ಅವರು ಕನಿಷ್ಠ ಆಗಸ್ಟ್ ಮಾಹೆಯಲ್ಲಿ ಹಾನಿಯಾದ ಮನೆಗಳ ಪುನರ್ ನಿಮರ್ಾಣ ಕಾರ್ಯವಾದರೂ ಒಂದು ವಾರದೊಳಗೆ ಆರಂಭವಾಗಲೇಬೇಕು ಎಂದು ಸೂಚಿಸಿದರು.

  ಸಂತ್ರಸ್ತರಿಗೆ ಈಗಾಗಲೇ ಮೊದಲ ಕಂತಾಗಿ ಒಂದು ಲಕ್ಷ ರೂ.ಗಳನ್ನು ಪಾವತಿಸಲಾಗಿದೆ. ಮನೆಗಳ ನಿಮರ್ಾಣ ಕಾರ್ಯ ಆರಂಭಿಸಿದರೆ ಎರನಡೇ ಹಂತದ ಜಿ.ಪಿ.ಎಸ್.ಮಾಡಿ ನಿಗಮದ ವೆಬ್ಸೈಟ್ಗೆ ಅಪ್ಲೋಡ್ ಮಾಡಿದರೆ ಎರಡನೇ ಕಂತಿನ ಹಣ ಪಾವತಿಸಲಾಗುವುದು. ತಕ್ಷಣವೇ ಈ ಕಾರ್ಯವನ್ನು ಆರಂಭಿಸಬೇಕೆಂದು ಸೂಚನೆ ನೀಡಿದರು.

  ಮಳೆಯಿಂದ ಹಾನಿಯಾಗಿರುವ ಎ ಮತ್ತು ಬಿ ವರ್ಗದ ಮನೆಗಳ ನಿಮರ್ಾಣಕ್ಕೆ ಸಕರ್ಾರ ಮೊದಲ ಕಂತಿನ ಹಣ ಬಿಡುಗಡೆಮಾಡಿದರು ಬಹಳಷ್ಟು ಫಲಾನುಭವಿಗಳು ಮನೆ ನಿಮರ್ಾಣ ಕಾರ್ಯವನ್ನು ಆರಂಭಿಸಿರುವುದಿಲ್ಲ. ಮುಂಗಡ ಹಣ ಪಡೆದರು ಮನೆ ನಿಮರ್ಾಣಕ್ಕೆ ಮುಂದಾಗದಿರುವುದಕ್ಕೆ ಕಾರಣವೇನು ಎಂದು ತಹಶೀಲ್ದಾರಗಳನ್ನು ಪ್ರಶ್ನಿಸಿದ ಉಸ್ತುವಾರಿ ಕಾರ್ಯದಶರ್ಿಗಳು ಪೌರಾಯುಕ್ತರು ಮತ್ತು ತಹಶೀಲ್ದಾರಗಳು ಈ ಕುರಿತಂತೆ ಫಲಾನುಭವಿಗಳಿಗೆ ಮನವರಿಕೆಮಾಡಿಕೊಡಿ ಎಂದು ತಿಳಿಸಿದರು.

ಕುಸಿದ ಮನೆಗಳ ಜಾಗದಲ್ಲಿ ಮನೆ ನಿಮರ್ಾಣ ಬದಲು ಅವರದೇ ಸ್ವಂತ ನಿವೇಶನವಿರುವ ಬೇರೆಡೆ ಮನೆ ನಿಮರ್ಾಣ ಮಾಡಲು ಫಲಾನುಭವಿಗಳು ಇಚ್ಚಿಸಿದಲ್ಲಿ ನಿಯಮಾನುಸಾರ ಅವರಿಗೆ ಅವಕಾಶ ಕಲ್ಪಿಸಿ. ಆದರೆ ಬೇರೆಕಡೆ ಅವರಿಗೆ   ಸ್ವಂತ ನಿವೇಶನ ಇಲ್ಲದಿದ್ದರೆ ಕುಸಿದ ಜಾಗೆಯಲ್ಲೇ ಮನೆ ನಿಮರ್ಾಣ ಕಾರ್ಯ ಆರಂಭಿಸಲು ತಿಳಿಸಿ ಎಂದು ಎಚ್ಚರಿಸಿದರು.

ಆಗಸ್ಟ್ ಮಾಹೆಯಲ್ಲಿ ಬಿದ್ದ ಮಳೆಗೆ ಎ ವರ್ಗದಡಿ 305 ಮನೆಗಳು ಸಂಪೂರ್ಣ ಹಾಳಾಗಿದ್ದು, ಈ ಪೈಕಿ 304 ಮನೆಗಳಿಗೆ 3.04 ಕೋಟಿ ಪರಿಹಾರ ಪಾವತಿಸಿದೆ. 

         ಬಿ ವರ್ಗದಡಿ 3,435 ಮನೆಗಳು ತೀವ್ರ ಹಾನಿಯಾಗಿದ್ದು ಈ ಎಲ್ಲ ಮನೆಗಳಿಗೂ ಪರಿಹಾರವಾಗಿ 34.35 ಕೋಟಿ ರೂ. ಪಾವತಿಸಲಾಗಿದೆ. ಸಿ ವರ್ಗದ ಅಲ್ಪಸ್ವಲ್ಪ ಹಾನಿಯಾದ 10,389 ಮನೆಗಳಿಗಳಿಗೆ ಪರಿಹಾರವಾಗಿ 51.95 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. 

      ಅಕ್ಟೋಬರ್-2019ರ ಮಾಹೆಯ ಅತಿವೃಷ್ಟಿಗೆ ಎ ವರ್ಗದ 58, ಬಿ ವರ್ಗದ 2354 ಹಾಗೂ ಸಿ ವರ್ಗದ 6358 ಮನೆಗಳು ಸೇರಿದಂತೆ 8,770 ಮನೆಗಳು ಹಾನಿಯಾಗಿವೆ.  ಆಗಸ್ಟ ಮತ್ತು ಅಕ್ಟೋಬರ್ ಮಾಹೆಯಲ್ಲಿ ಎ ಮತ್ತು ಬಿ ವರ್ಗದ 5136 ಮನೆಗಳ ನಿಮರ್ಾಣಕ್ಕೆ ಜಿಲ್ಲಾಧಿಕಾರಿಗಳಿಂದ ಅನುಮೋದನೆ ನೀಡಲಾಗಿದೆ.  ಮನೆ ನಿಮರ್ಾಣಕ್ಕೆ ಸಂತ್ರಸ್ತರಿಗೆ ಜಾಗೃತಿ ಮೂಡಿಸಲಾಗಿದೆ. ಮುಖ್ಯಮಂತ್ರಿಗಳ ಮನವಿ ಪತ್ರ ವಿತರಿಸಲಾಗಿದೆ. ಈ ಪೈಕಿ 420 ಫಲಾನುಭವಿಗಳು ಮನೆಗಳ ನಿಮರ್ಾಣ ಕಾರ್ಯ ಆರಂಭಿಸಿದ್ದಾರೆ ಎಂದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ವಿವರಿಸಿದರು.

 ಬೆಳೆಹಾನಿ: ಮಳೆಯಿಂದ ಹಾನಿಯಾಗಿರುವ ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳ ಕುಸಿತದಿಂದ ಪಾಠ ಪ್ರವಚನಕ್ಕೆ ತೊದಂರೆಯಾಗಿದೆ ಎಂಬ ಮಾಹಿತಿ ಪಡೆದ ಅವರು, ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು. ರಸ್ತೆ ಸೇತುವೆ ಹಾಗೂ ಮೂಲ ಸೌಕರ್ಯಗಳ ದುರಸ್ತಿ ಕಾಮಗಾರಗಳ ವಿವರ ಪಡೆದ ಉಸ್ತುವಾರಿ ಕಾರ್ಯದಶರ್ಿಗಳು ಕೆರೆ ದುರಸ್ತಿ ಸಂದರ್ಭದಲ್ಲಿ ಮನರೇಗಾ ಯೋಜನೆಯಡಿ ನೆರವು ಪಡೆಯುವಂತೆ ಅಭಿಯಂತರರಿಗೆ ಸೂಚನೆ ನೀಡಿದರು.

ಬೆಳೆಹಾನಿ ಹಾಗೂ ಬೆಳೆ ಪರಿಹಾರ ಕುರಿತಂತೆ ಮಾಹಿತಿ ಪಡೆದ ಅವರು ಕೃಷಿ, ತೋಟಗಾರಿಕೆ  ಹಾಗೂ ರೇಷ್ಮೆ ಸೇರಿದಂತೆ 182960 ಹೆಕ್ಟೇರ್ ಪ್ರದೇಶದ ಬೆಳೆ ಆಗಸ್ಟ್  ಮತ್ತು ಅಕ್ಟೋಬರ್ ತಿಂಗಳ ಮಳೆಗೆ ಹಾನಿಯಾಗಿದ್ದು, 1,57,465 ರೈತರು ಬಾಧಿತರಾಗಿದ್ದಾರೆ. 909.33 ಕೋಟಿ ರೂ. ಆಥರ್ಿಕ ನಷ್ಟವಾಗಿದೆ.  

       ಮಾರ್ಗಸೂಚಿಯಂತೆ 154.21  ಕೋಟಿ ರೂ. ಬೇಡಿಕೆ ಸಲ್ಲಿಸಲಾಗಿದೆ. ಈವರೆಗೆ 33,644 ರೈತರಿಗೆ 56.06 ಕೋಟಿ ಪರಿಹಾರ ಪಾವತಿಸಲಾಗಿದೆ. 1,08,435 ರೈತರಿಗೆ ಪರಿಹಾರ ಪಾವತಿಸಬೇಕಾಗಿದೆ. 85.09 ಕೋಟಿ ರೂ. ರೈತರಿಗೆ ಹಣ ಪಾವತಿಸಬೇಕಾಗಿದೆ ಎಂದು ಕೃಷಿ ಜಂಟಿ ನಿದರ್ೆಶಕ ಮಂಜುನಾಥ್ ಅವರು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕ್ಕಮ್ಮನವರ, ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು, ಜಿಲ್ಲೆಯ ತಹಶೀಲ್ದಾರ ಹಾಗೂ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿಗಳು, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.