ಜಾರ್ಖಂಡ್ನಲ್ಲಿ ಜೊಹರ್ ಜನ ಆಶೀರ್ವಾದ ಯಾತ್ರೆಗೆ ಅಮಿತ್ ಶಾ ಚಾಲನೆ
ನವದೆಹಲಿ, ಸೆ 18 ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಜಾರ್ಖಂಡ್ನಲ್ಲಿ ಬುಧವಾರ 'ಜೊಹರ್ ಜನ್ ಆಶೀರ್ವಾದ್ ಯಾತ್ರೆ"ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ.
ಜಮತರಾದ ಕಾಲಿ ಮಂದಿರ ಮೈದಾನದಿಂದ ಯಾತ್ರೆ ಆರಂಭಗೊಳ್ಳಲಿದ್ದು, ಮುಖ್ಯಮಂತ್ರಿ ರಘುಬರ್ ದಾಸ್ ಭಾಗವಹಿಸಲಿದ್ದಾರೆ.
ಜೋಹರ್ ಜನ ಆಶೀರ್ವಾದ್ ಯಾತ್ರೆ ಈ ಮೊದಲು ಸೆಪ್ಟೆಂಬರ್ 15 ರಂದು ನಿಗದಿಯಾಗಿತ್ತು, ಆದರೆ ನಂತರ ಅದನ್ನು ಸೆಪ್ಟೆಂಬರ್ 18 ಕ್ಕೆ ಮುಂದೂಡಲಾಯಿತು.
ಏಳು ದಿನಗಳ 'ಜೊಹರ್ ಜನ ಆಶೀರ್ವಾದ್ ಯಾತ್ರೆ, 581 ಕಿ.ಮೀ. ಸಂಚರಿಸಲಿದ್ದು, ಈ ಸಮಯದಲ್ಲಿ ಮುಖ್ಯಮಂತ್ರಿ ಹಲವು ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಖನಿಜ ಸಮೃದ್ಧ ರಾಜ್ಯವಾಗಿರುವ ಜಾರ್ಖಂಡ್ನಲ್ಲಿ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 