ಎಎಪಿಗೂ , ನಮಗೂ ಯಾವ ಸಂಬಂಧವಿಲ್ಲ: ತಂದೆ ಸ್ಪಷ್ಟಣೆ
ನವದೆಹಲಿ, ಫೆ 5 ಕಳೆದ ವಾರ ದೆಹಲಿಯ ಶಾಹೀನ್ ಬಾಗ್ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದ 25 ವರ್ಷದ ಕಪಿಲ್ ಗುಜ್ಜರ್ ಕುಟುಂಬಕ್ಕೆ ಎಎಪಿ ಜೊತೆ ಯಾವುದೆ ರಾಜಕೀಯ ಸಂಬಂಧವಿಲ್ಲ ಕುಟುಂಬ ಸದಸ್ಯರು ಸ್ಪಷ್ಟಪಡಿಸಿದ್ದಾರೆ. ಎಎಪಿ ಜೊತೆ ಸಂಬಂಧವಿದೆ ದೆಹಲಿ ಪೊಲೀಸರ ಹೇಳಿಕೆಯನ್ನೂ ಕುಟುಂಬ ಸದಸ್ಯರು ಕಟ್ಟುಕತೆ ಎಂದೂ ನಿರಾಕರಿಸಿದ್ದಾರೆ.
ದಕ್ಷಿಣ ದೆಹಲಿಯ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟಿಸಿ ನಡೆಸುತ್ತಿರುವ ಹೋರಾಟಗಾರರ ಮೇಲೆ ಶನಿವಾರ ಕಪಿಲ್ ಗುಜ್ಜರ್ ಎಂಬಾತ ಗುಂಡು ಹಾರಿಸಿದ್ದಲ್ಲದೆ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದ. ಕಪಿಲ್ ಎಎಪಿ ಹಿರಿಯ ನಾಯಕ ಸಂಜಯ್ ಸಿಂಗ್ ಹಾಗೂ ಅತಿಶಿ ಅವರೊಂದಿಗೆ ಫೋಟೊದಲ್ಲಿ ಕಾಣಿಸಿಕೊಂಡಿರುವುದನ್ನು ಬಿಟ್ಟರೆ ಕಪಿಲ್ ತಂದೆ ಹಾಗೂ ಸಹೋದರ ದೆಹಲಿಯ ಆಡಳಿತಾರೂಢ ಪಕ್ಷ ಎಎಪಿಯೊಂದಿಗೆ ನಮಗೆ , ಕುಟುಂಬಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಪತ್ರಕರ್ತರ ಮುಂದೆಯೇ ಸ್ಪಷ್ಟಣೆ ನೀಡಿದ್ದಾರೆ.
ರಾಜಕೀಯದಿಂದ ನಮಗೆ ಏನೂ ಆಗಬೇಕಾಗಿಲ್ಲ. ಈ ಬಾರಿ ಬಿಜೆಪಿ ಅಭ್ಯರ್ಥಿ ಪ್ರಚಾರಕ್ಕೆ ಬಂದಿದ್ದರು. ನಾನು ಆ ಅಭ್ಯರ್ಥಿಗೂ ಸಹ ಹಾರ ಹಾಕಿದ್ದೆ. ನಾನು ಎಲ್ಲ ಪಕ್ಷದ ಅಭ್ಯರ್ಥಿಯನ್ನು ಸ್ವಾಗತಿಸುತ್ತೇನೆ ಇದನ್ನೆ ತಪ್ಪಾಗಿ ಭಾವಿಸಿ ಕೊಂಡರೆ ಮಾಡುವುದೇನು ಎಂದು ಕಪಿಲ್ ತಂದೆ ಗಜೇ ಸಿಂಗ್ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 