ಕಂಪ್ಲಿ-ಕೋಟೆಯಲ್ಲಿ ರಸ್ತೆ ಬದಿ ಕಂದಕ್ಕೆ ಉರುಳಿದ ಭತ್ತ ತುಂಬಿದ ಲಾರಿ
A lorry loaded with paddy overturned on the roadside in Kampli-kote.
ಕಂಪ್ಲಿ.04: ಕಂಪ್ಲಿ-ಕೋಟೆಯ ಸುಂಕ್ಲಮ್ಮ ದೇವಸ್ಥಾನದ ಹತ್ತಿರ ನೂರಾರು ಚೀಲ ಭತ್ತ ತುಂಬಿದ್ದ ಬೃಹತ್ ಲಾರಿ ರಸ್ತೆ ಬದಿಯ ಕಂದಕಕ್ಕೆ ಉರುಳಿದೆ. ಮಂಗಳವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಗಂಗಾವತಿಯಿಂದ ತಮಿಳು ನಾಡಿಗೆ ಭತ್ತವನ್ನು ತುಂಬಿಕೊಂಡು ಹೊರಟಿದ್ದ ಬೃಹತ್ ಲಾರಿ ಕೋಟೆಯ ಸುಂಕ್ಲಮ್ಮ ದೇವಸ್ಥಾನದ ಹತ್ತಿರದ ಬೃಹತ್ ಕಂದಕಕ್ಕೆ ಚಾಲಕನ ನಿಯಂತ್ರಣ ತಪ್ಪಿ ಉರುಳಿದೆ. ಇಲ್ಲಿ ರಸ್ತೆ ಸ್ವಲ್ಪ ಕಿರಿದಾಗಿರುವುದರ ಜೊತೆಗೆ ರಸ್ತೆಯ ಕೆಳಗೆ ಹಳ್ಳವಿದ್ದು, ಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಕಿರಿದಾಗಿರುವ ಕಾರಣ ಎದುರಿಗೆ ಬರುವ ವಾಹನಗಳಿಗೆ ಮಾರ್ಗ ಬಿಡಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಹಳ್ಳದ ಕಂದಕಕ್ಕೆ ಉರುಳಿದೆ.
ಆದರೆ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಬೃಹತ್ ಲಾರಿಯಲ್ಲಿದ್ದ ಸುಮಾರು 400 ಚೀಲ ಭತ್ತ ಕಂದಕಕ್ಕೆ ಬಿದ್ದಿದ್ದು, ಇದರಲ್ಲಿ ಸುಮಾರು ನೂರಕ್ಕ ಅಧಿಕ ಚೀಲ ಭತ್ತ ನೀರಲ್ಲಿ ಬಿದ್ದು, ಲಕ್ಷಾಂತರ ರೂಗಳ ನಷ್ಟ ಸಂಭವಿಸಿದೆ. ಬೃಹತ್ ಲಾರಿ ಕಂದಕಕ್ಕೆ ಉರುಳಿದ ಪರಿಣಾಮ ಕೆಲವು ಸಮಯ ಗಂಗಾವತಿ ಕಂಪ್ಲಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 