4 ಬಾರಿ ಗ್ರ್ಯಾಮ್ ಸ್ಲ್ಯಾಮ್ ಚಾಂಪಿಯನ್ ಶರಪೋವಾ ಮುಂದಿನ ಅಧ್ಯಾಯದ ಬಗ್ಗೆ ಮಾಹಿತಿ ನೀಡಿದ್ದಾರೆ
ನವದೆಹಲಿ, ಫೆ 27 : ನನ್ನನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕ್ರೀಡೆಯಾದ ಟೆನಿಸ್ಗೆ ಐದು ಬಾರಿ ಗ್ರ್ಯಾನ್ ಸ್ಲ್ಯಾಮ್ ಚಾಂಪಿಯನ್ ಮರಿಯಾ ಶರಪೋವಾ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಮುಂದಿನ ಅಧ್ಯಾಯವನ್ನು ಟೆನಿಸ್ ಕ್ರೀಡೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದ್ದಾರೆ.
"ಟೆನಿಸ್ ನನಗೆ ಜಗತ್ತನ್ನು ತೋರಿಸಿದೆ ಮತ್ತು ಅದು ನಾನು ಏನು ಮಾಡಿದ್ದೇನೆ ಎಂಬುದನ್ನು ನನಗೆ ತೋರಿಸಿದೆ. ನಾನು ನನ್ನನ್ನು ಹೇಗೆ ಪರೀಕ್ಷಿಸಿದ್ದೇನೆ ಮತ್ತು ನನ್ನ ಬೆಳವಣಿಗೆಯನ್ನು ಹೇಗೆ ಅಳೆಯುತ್ತೇನೆ ಎಂಬುದನ್ನು ನನಗೆ ಗುರುತು ಮಾಡಿದೆ. ಹಾಗಾಗಿ, ನನ್ನ ಮುಂದಿನ ಅಧ್ಯಾಯ ಪರ್ವತ, ಇದಕ್ಕೆ ತನ್ನನ್ನು ತಾನು ತಳಲ್ಪಡುತ್ತಿದ್ದೇನೆ. ನಾನು ಇನ್ನೂ ಏರುತ್ತೇನೆ, ನಾನು ಇನ್ನೂ ಬೆಳೆಯುತ್ತಿದ್ದೇನೆ" ಎಂದು ವೃತ್ತಿಪರ ಟೆನಿಸ್ನಿಂದ ನಿವೃತ್ತಿ ಘೋಷಿಸಿದ ನಂತರ ಶರಪೋವಾ ಟ್ವೀಟ್ ಮಾಡಿದ್ದಾರೆ.
ವೋಗ್ ಮತ್ತು ವ್ಯಾನಿಟಿ ಫೇರ್ ನಿಯತಕಾಲಿಕೆಗಳ ಅಂಕಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮರುಕಳಿಸುವ ಗಾಯಗಳು ನಿವೃತ್ತಿಯ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ ಎಂದು ಬುಧವಾರ 32ರ ಪ್ರಾಯದ ಟೆನಿಸ್ ಆಟಗಾರ್ತಿ ಹೇಳಿದ್ದರು.
"ನೀವು ತಿಳಿದಿರುವ ಏಕೈಕ ಜೀವನವನ್ನು ನೀವು ಹೇಗೆ ಬಿಡುತ್ತೀರಿ? ನೀವು ಚಿಕ್ಕ ಹುಡುಗಿಯಾಗಿದ್ದಾಗಿನಿಂದ ನೀವು ತರಬೇತಿ ಪಡೆದ ಅಂಗಳಗಳಿಂದ ನೀವು ಹೇಗೆ ದೂರ ಹೋಗುತ್ತೀರಿ? ನೀವು ಪ್ರೀತಿಸುವ ಆಟವಿದು, ಇದು ನಿಮಗೆ ಹೇಳಲಾಗದ ಕಣ್ಣೀರನ್ನು ತಂದಿದೆ ಮತ್ತು ಹೇಳಲಾಗದ ಸಂತೋಷಗಳು ಕೂಡ. 28 ವರ್ಷಗಳಿಗಿಂತ ಹೆಚ್ಚು ಕಾಲ ನಿಮ್ಮ ಹಿಂದೆ ಒಟ್ಟುಗೂಡಿದ ಅಭಿಮಾನಿಗಳ ಜೊತೆಗೆ ನೀವು ಕುಟುಂಬವನ್ನು ಕಂಡುಕೊಂಡ ಕ್ರೀಡೆಯೇ? ನಾನು ಇದಕ್ಕೆ ಹೊಸಬಳಾಗಿದ್ದೇನೆ, ಆದ್ದರಿಂದ ದಯವಿಟ್ಟು ನನ್ನನ್ನು ಕ್ಷಮಿಸಿ. ಟೆನಿಸ್ - ನಾನು ವಿದಾಯ ಹೇಳುತ್ತಿದ್ದೇನೆ "ಎಂದು ಅವರು ಹೇಳಿದ್ದರು.
ಟೆನಿಸ್ ವೃತ್ತಿ ಜೀವನದ ವಿದಾಯದ ನಿರ್ಧಾರ ತಕ್ಷಣದಿಂದಲೇ ಜಾರಿಯಾಗುತ್ತದೆಯೇ ಎಂಬಂತೆ ಮರಿಯಾ ಶರಪೋವಾ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಆದರೆ, 2020ರ ಆಸ್ಟ್ರೇಲಿಯಾ ಓಪನ್ ಆಡಿದ ಶರಪೋವಾ ಅವರು ಮೊದಲನೇ ಸುತ್ತಿನ ಪಂದ್ಯದಲ್ಲಿ 19ನೇ ಶ್ರೇಯಸ ಸರ್ಬಿಯಾದ ಡೊನ್ನಾ ವೆಕಿಚ್ ವಿರುದ್ಧ ಸೋಲುಂಡಿದ್ದರು.
ದೀರ್ಘ ಕಾಲ ತಮ್ಮ ಭುಜದ ಗಾಯಕ್ಕೆ ತುತ್ತಾಗಿದ್ದ ರಷ್ಯಾದ ಟೆನಿಸ್ ಆಟಗಾರ್ತಿ ಕಳೆದ ವರ್ಷ ಯಾವುದೇ ಪಂದ್ಯಗಳಾಡಿರಲಿಲ್ಲ. 2019ರ ಯುಎಸ್ ಓಪನ್ ಸಮಯದಲ್ಲಿ ಟೆನಿಸ್ಗೆ ವಿದಾಯ ಕುರಿತು ಮುನ್ಸೂಚನೆ ನೀಡಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 