ಗೋಏರ್ ನಿಂದ 18 ವಿಮಾನ ಸಂಚಾರ ರದ್ದು, ಪ್ರಯಾಣಿಕರಿಗೆ ಅನಾನುಕೂಲ
ನವದೆಹಲಿ, ಡಿ 23, ವಿಮಾನ
ಹಾಗೂ ನುರಿತ ಚಾಲಕ ಸಿಬ್ಬಂದಿ ಕೊರತೆಯ ಕಾರಣ ಬೆಂಗಳೂರು
ದೆಹಲಿ, ಮುಂಬೈ, , ಕೋಲ್ಕತಾ ಮತ್ತು ಪಾಟ್ನಾ ಸೇರಿದಂತೆ 18 ದೇಶಿಯ
ವಿಮಾನ ಗಳ ಸಂಚಾರವನ್ನು ಗೋ ಏರ್ ರದ್ದುಪಡಿಸಿದ್ದು
ಪ್ರಯಾಣಿಕರಿಗೆ ಅನಾನುಕೂಲವಾಗಿದೆ. ಮುಂಬೈ, ಗೋವಾ,
ಬೆಂಗಳೂರು, ದೆಹಲಿ, ಶ್ರೀನಗರ, ಜಮ್ಮು, ಪಾಟ್ನಾ, ಇಂದೋರ್ ಮತ್ತು ಕೋಲ್ಕತ್ತಾ ಸೇರಿದಂತೆ 18 ವಿಮಾನ ಸಂಚಾರವನ್ನು ಗೋಏರ್ ಸೋಮವಾರ ರದ್ದುಗೊಳಿಸಿದೆ. ವಿಮಾನಗಳು ಮತ್ತು ಸಿಬ್ಬಂದಿ ಕೊರತೆ,ಕಾರಣ ಸಂಚಾರ ರದ್ದಾಗಿದೆ ಎನ್ನಲಾಗಿದೆ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆಯ ಕಾರಣದಿಂದಾಗಿ
ಸೇವೆಗೆ ಅಡ್ಡಿ ಉಂಟಾಗಿದೆ ಎಂದು ಗೋಏರ್ ಹೇಳಿಕೆಯಲ್ಲಿ
ತಿಳಿಸಿದೆ.ಆದರೆ ಸೋಮವಾರ ರದ್ದಾದ ವಿಮಾನಗಳ ನಿಖರ ಸಂಖ್ಯೆಯನ್ನು ವಿಮಾನ ಸಂಸ್ಥೆ ಬಹಿರಂಗಪಡಿಸಿಲ್ಲ ಇದರ ಜೊತೆಗೆ ದೇಶದ ಕೆಲವು ಭಾಗಗಳಲ್ಲಿನ ಪ್ರತಿಕೂಲ ಹವಾಮಾನ,
ಮಂದಬೆಳಕು , ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳು ಸಹ ಇದಕ್ಕೆ ಕಾರಣ ಎನ್ನಲಾಗಿದೆ ಆದರೆ ವಿಮಾನಗಳ ಹಠಾತ್ ರದ್ದತಿಯಿಂದ ಪ್ರಯಾಣಿಕರಿಗೆ ಸಾಕಷ್ಟು
ಅನಾನುಕೂಲತೆ ಉಂಟಾಗಿದೆ ಗೋಏರ್ ಬೆಳಿಗ್ಗೆ ವಿಮಾನ
ರದ್ದಾಗಿದೆ ಎಂದು ಸಂದೇಶ ಕಳುಹಿಸಿದೆ ಕೊನೆ ಘಳಿಕೆಯಲ್ಲಿ
ನಾನು ಏನು ಮಾಡಬೇಕು ಎಂದು ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿದ್ದಾರೆ.ಆದರೂ ಪ್ರಯಾಣಿಕರ
ಅನಾನುಕೂಲತೆ ಕಡಿಮೆ ಮಾಡಲು ಸಾಧ್ಯವಿರುವ
ಎಲ್ಲ ಉಪಕ್ರಮ ಪ್ರಾರಂಭಿಸುವುದಾಗಿಯೂ ಎಂದು ವಿಮಾನಯಾನ ಸಂಸ್ಥೆ ಭರವಸೆ ನೀಡಿದೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 