ಸಿಂದಗಿ: 1000 ಎಕರೆಗೂ ಹೆಚ್ಚು ಜಮೀನು ಜಲಾವೃತ ಬೆಳೆಹಾನಿ
ಲೋಕದರ್ಶನ ವರದಿ
ಸಿಂದಗಿ 29: ಕೃಷ್ಣಾ ಭಾಗ್ಯ ಜಲ ನಿಗಮದ ಇಂಡಿ ಮುಖ್ಯ ಕಾಲುವೆ 72 ನೇ ಕಿ.ಮೀ ಕಾಲುವೆಯ ಎಡ ಭಾಗ ಒಡೆದ ಪರಿಣಾಮ ಹಿಕ್ಕಣಗುತ್ತಿ, ಕಲಹಳ್ಳಿ, ಕೋರಳ್ಳಿ ವಿಭೂತಿಹಳ್ಳಿ, ರಾಂಪೂರ ಗ್ರಾಮಗಳ ಸುಮಾರು 1000 ಎಕರೆಕ್ಕೂ ಹೆಚ್ಚು ಜಮೀನು ಜಲಾವೃತವಾಗಿ ಬೆಳೆಹಾನಿಯಾದ ಘಟನೆ ರವಿವಾರ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಬೇಟಿ ನೀಡಿದ ಮಾಜಿ ಶಾಸಕ ರಮೇಶ ಭೂಸನೂರ ಅವರು ಪರಸ್ಥಿತಿ ಪರಶೀಲನೆ ಮಾಡಿ ರೈತರೊಂದಿಗೆ ಮಾತನಮಾಡಿ, ಶೀತಲಗೊಂಡ ಕಾಳುವೆ ಒಡೆದು ಹರಿಯುವ ನೀರು ಜಮೀನುಗಳಿಗೆ ಹರಿದು ಬಂದಿದೆ. ಇದರಿಂದ ಬೆಳೆಹಾನಿಯಾಗಿದೆ. ರೈತರು ಆತಂಕ ಪಡಬಾರದು. ನಾನು ನಿಮ್ಮೊಂದಿಗಿದ್ದೇನೆ. ಹಾನಿಗೊಳಗಾದ ರೈತರು ಆತಂಕ ಪಡಬೇಕಾಗಿಲ್ಲ. ಈಗಾಗಲೇ ಕಬಿಜೆಎನ್ಎಲ್ ಎಂ.ಡಿ. ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಇಲ್ಲಿಯ ಪರಸ್ಥಿ ಬಗ್ಗೆ ಹೇಳಿದ್ದೇನೆ. ಸುಮಾರು ಸಾವಿರಾರು ಎಕರೆ ಜಮೀನಿಗೆ ಕಾಲುವೆ ನೀರು ಹರಿದು ಬಂದಿದೆ. ಇದರಿಂದ ರೈತರು ಬೆಳೆದ ತೊಗರಿ, ಹತ್ತಿ, ಕಬ್ಬು, ದ್ರಾಕ್ಷಿ ಬೆಳೆ ಹಾನಿಯಾಗಿದೆ. ಕೂಡಲೇ ಹಾನಿಯಾದ ವರದಿಯನ್ನು ಸಲ್ಲಿಸಬೇಕು ಶಿಘ್ರದಲ್ಲಿ ಪರಿಹಾರ ನೀಡುವ ಕ್ರಮ ಕೈಕೊಳ್ಳಬೇಕು ಎಂದು ಹೇಳಿದ್ದೇನೆ ಎಂದು ಹೇಳಿದರು.
ಲಗೊಂಡ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಲಾಗಿದೆ. ಅವರು ನಿರ್ಲಕ್ಷ ಮಾಡಿದ್ದಾರೆ. ಕೂಡಲೇ ಅಧಿಕಾರಿಗಳ ಮೇಲೆ ಕ್ರಮ ಕೈಕೊಳ್ಳಬೇಕು. ಸಾಲ ಮಾಡಿ ಬೆಳೆದ ದ್ರಾಕ್ಷಿ, ಕಬ್ಬು, ಹತ್ತಿ, ತೊಗರೆ ಬೆಳೆಗಳು ಅಧಿಕಾರಿಗಳ ನಿರ್ಲಕ್ಷದಿಂದ ಕಾಲುವೆ ಒಡೆದು ಕಾಲುವೆ ನೀರು ಜಮೀನುಗಳಿಗೆ ಹರಿದು ಬಂದಿದೆ. ಇದರಿಂದ ನಮಗೆ ಸಾಕಷ್ಟು ಹಾನಿಯಾಗಿದೆ. ಶಿಘ್ರದಲ್ಲಿ ಹಾನಿಗೊಳಗಾದ ಪ್ರದೇಶವನ್ನು ಸವರ್ೆ ಮಾಡಿ ಪರಿಹಾರ ನೀಡಬೇಕು ಎಂದು ಹಾಣಿಗೊಳಗಾದ ರೈತರಾದ ರಾಜುಗೌಡ ಪಾಟೀಲ, ಸರ್ವಜ್ಞ ಹೀರೆಮಠ, ವಿವೇಕಾನಂದ ಪಾಟೀಲ, ಈರಣ್ಣ ಬಿರಾದಾರ, ಸಂಗಣ್ಣ ಮಿರಗಿ, ಮಲ್ಲಯ್ಯ ಹೀರೆಮಠ ಸೇರಿದಂತೆ ಇನ್ನುಳಿದ ರೈತರು ಆಗ್ರಹ ಪಡೆಸಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 