ಸಿಲಿಂಡರ ಸ್ಪೋಟದ ಸಂತ್ರಸ್ತರಿಗೆ ಸಂಜಯ ಪಾಟೀಲ ಭೇಟಿ
ಲೋಕದರ್ಶನ ವರದಿ
ಬೆಳಗಾವಿ 13: ಸಿಲಿಂಡರ ಸ್ಪೋಟದಿಂದಾಗಿ ಮನೆ ಸುಟ್ಟು ಹಾನಿಗೊಳಗಾದ ಸಮೀಪದ ಗಜಪತಿ ಗ್ರಾಮದ ಸಂತ್ರಸ್ಥ ಮಾರುತಿ ರುದ್ರಪ್ಪ ಕರಡಿ ಯವರ ಮನೆಗೆ ಮಾಜಿ ಶಾಸಕ ಹಾಗೂ ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಬಟ್ಟೆ, ಬ್ಲಾಂಕೇಟ ಹಾಗೂ 1 ತಿಂಗಳಿಗಾಗುವಷ್ಟು ಮನೆ ಬಳಕೆ ಹಾಗೂ ಪಡಿತರ ಸಾಮಗ್ರಿ ವಿತರಿಸಿ ಮಾತನಾಡಿ ಸರಕಾರದಿಂದ ಸಂತ್ರಸ್ಥರಿಗೆ ಮನೆ ಕಟ್ಟಿಸಿಕೊಳ್ಳಲು ಅನುದಾನ ಕೊಡಿಸುವದಾಗಿ ಭರವಸೆ ನೀಡಿದರು. ಸ್ಥಳೀಯ ಗ್ರಾಪಂ ನಿಂದ ತಾತ್ಕಾಲಿಕ ಶೆಡ್ ನಿಮರ್ಿಸಿಕೊಳ್ಳಲು ಸಂತ್ರಸ್ಥರಿಗೆ 10 ಸಾವಿರ ರೂ. ಅನುದಾನ ಕೊಡಿಸುವದಾಗಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಮಾಜಿ ಅಧ್ಯಕ್ಷ ಗಂಗಾಧರ ಘಸಾರಿ ಹೇಳಿದರು.
ರಮೇಶಗೌಡ ಪಾಟೀಲ, ಸುನೀಲ ದಳವಾಯಿ, ಸಂತೋಷ ಅಂಗಡಿ, ರಮೇಶಗೌಡ ಪಾಟೀಲ(ಮಡ್ಡಿ), ವಜ್ರಕಾಂತ ಹಿರೇಮಠ, ಮಂಜು ಧರೆನ್ನವರ, ಸಂತೋಷ ಅಂಗಡಿ, ಬಸವರಾಜ ಡಮ್ಮಣಗಿ, ರವಿ ಪಾರ್ವತಿ, ಚನಬಸ್ಸಪ್ಪಾ ಲಂಗೂಟಿ, ಭೀಮನಗೌಡ ಪಾಟೀಲ, ದುಂಡಪ್ಪ ಮೆಳೇದ ಸೇರಿದಂತೆ ಹಲವರು ಇದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 