ಪಿಆರ್ಪಿ ಚಿಕಿತ್ಸಾ ವಿಧಾನ ಅತ್ಯಂತ ಪ್ರಯೋಜನಕಾರಿ: ವಿಶ್ವ ಸಮ್ಮೇಳನದಲ್ಲಿ ಡಾ. ಎಸ್.ಎ. ತಿಪ್ಪಣ್ಣವರ ಮಾಹಿತಿ..!
PRP treatment method is extremely beneficial: Dr. S.A. Thippanna's information at the World Confere
ಕಾಗವಾಡ 19: ಪಿಆರ್ಇ ಇದು ನೋವು ನಿವಾರಣೆಗೆ ಅತ್ಯಾಧುನಿಕ ಯಂತ್ರದ ಸಹಾಯದಿಂದ ಶಸ್ತ್ರಚಿಕಿತ್ಸೆ ಇಲ್ಲದೇ ನಡೆಸುವ ಚಿಕಿತ್ಸಾ ವಿಧಾನವಾಗಿದೆ. ಇದಕ್ಕೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ, ಮತ್ತು ಇದು ಅತ್ಯಂತ ಕೈಗುಟಕುವ ಬೆಲೆಯಲ್ಲಿ ಲಭ್ಯವಿದೆ ಎಂದು ಸಾಂಗಲಿಯ ನೋವು ನಿವಾರಕ ತಜ್ಞ ಡಾ. ಎಸ್.ಎ. ತಿಪ್ಪಣ್ಣವರ ಮಾಹಿತಿ ನೀಡಿದ್ದಾರೆ.
ಅವರು ಇತ್ತಿಚಿಗೆ ಇಂಡಿಯನ್ ಸೊಸೈಟಿ ಫಾರ್ ದಿ ಸ್ಟಡಿ ಆಫ್ ಪೇನ್ ನ ಹೈದರಾಬಾದ್ ಶಾಖೆಯಲ್ಲಿ ಆಯೋಜಿಸಿದ್ದ ವಿಶ್ವ ಸಮ್ಮೇಳನದಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದರು. ಈ ಸಮ್ಮೇಳನದಲ್ಲಿ 600 ಕ್ಕೂ ಹೆಚ್ಚು ತಜ್ಞರು ಭಾಗವಹಿಸಿದ್ದರು.
ಈ ಸಮ್ಮೇಳನದಲ್ಲಿ ಮಸ್ಕ್ಯುಲೋಸ್ಕೆಲಿಥಲ್ ಕಾಯಿಲೆಗಳು ಮತ್ತು ಟೆಂಡಿನೋಪಥಿ ಚಿಕಿತ್ಸೆ ಮತ್ತು ಸ್ನಾಯುರಜ್ಜು ಮತ್ತು ಕ್ರೀಡಾ ಗಾಯಗಳಿಗೆ ಪಿಆರ್ಪಿ ಚಿಕಿತ್ಸೆಯು ಹೇಗೆ ಪರಿಣಾಮಕಾರಿಯಾಗಿದೆ ಎಂಬುದರ ಕುರಿತು ಡಾ. ತಿಪ್ಪಣ್ಣವರ ಮಾರ್ಗದರ್ಶನ ಮಾಡಿದರು.
ಪಿಆರ್ಪಿ ಚಿಕಿತ್ಸೆಯು ಡಾ. ಎಸ್.ಎ. ತಿಪ್ಪಣ್ಣವರ ಅವರ ನೋವು ನಿವಾರಣಾ ಕೇಂದ್ರ, ಅಕ್ಸಾನ್ ಪೇನ್ ಸೆಂಟರ್ ಇಂಡಿಯಾ, ಹೋಟೆಲ್ ವುಡ್ಹೌಸ್ ಎದುರು, ಗುಲ್ಮೋರ್ ಕಾಲೋನಿ, ಗಲಿಯಲ್ಲಿ ಲಭ್ಯವಿದೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 