ದನದ ಕೊಟ್ಟಿಗೆಗೆ ಹಾನಿ ಮಾಡಿದ ಘಟನೆ
Incident of damage to a cowshed
ದಾಂಡೇಲಿ 02: ಇಲ್ಲಿಗೆ ಸಮೀಪದ ಆಲೂರು ಗ್ರಾಮದ ಹೊಲಕ್ಕೆ ಒಂಟಿ ಸಲಗವೊಂದು ದನದ ಕೊಟ್ಟಿಗೆಗೆ ಹಾನಿ ಮಾಡಿದ ಘಟನೆ ರವಿವಾರ ಮಧ್ಯರಾತ್ರಿ ನಡೆದಿದೆ. ಕಳೆದ ಕೆಲವು ತಿಂಗಳಿಂದ ಆಲೂರು ಗ್ರಾಮಕ್ಕೆ ಮೇಲಿಂದ ಮೇಲೆ ಕಾಡಾನೆಗಳು ನುಗ್ಗಿ ಬೆಳೆ ನಾಶ ಮಾಡುತ್ತಾ ಬಂದಿದ್ದವು. ಆದರೆ ರವಿವಾರ ಮಧ್ಯರಾತ್ರಿ ಆಲೂರಿನ ಹೊಲಕ್ಕೆ ನುಗ್ಗಿರುವ ಒಂಟಿಸಲಗವೊಂದು ಬೆಳೆಗಳನ್ನು ಹಾನಿ ಮಾಡಿ, ಹೊಲದಲ್ಲಿದ್ದ ಕೊಟ್ಟಿಗೆಗೆ ನುಗ್ಗಿ ದ್ವಂಸಗೊಳಿಸಿದ್ದಲ್ಲದೆ, ಅಲ್ಲಿದ್ದ ಎಮ್ಮೆ ಮತ್ತು ಕರುವಿಗೆ ಗಾಯಗೊಳಿಸಿದ ಘಟನೆ ಕೂಡಾ ಜರುಗಿದೆ. ಆಲೂರಿನ ಪುಂಡಲಿಕ ಜಾಧವ ಎನ್ನುವವರ ಹೊಲದಲ್ಲಿರುವ ದನದ ಕೊಟ್ಟಿಗೆಯಾಗಿತ್ತು. ಅರಣ್ಯ ಇಲಾಖೆಯವರು ಕೂಡಲೇ ಪರೀಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವದರೊಂದಿಗೆ ಕಾಡಾನೆಯನ್ನು ಕಾಡಿಗಟ್ಟುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 