ಹಳೆ ವಿದ್ಯಾರ್ಥಿಗಳಿಂದ ಅಗಲಿದ ಗುರುಗಳು, ಸ್ನೇಹತರಿಗೆ ನಮನ
Former students pay tribute to departed teachers and friends
ಹಳೆ ವಿದ್ಯಾರ್ಥಿಗಳಿಂದ ಅಗಲಿದ ಗುರುಗಳು, ಸ್ನೇಹತರಿಗೆ ನಮನ
ಹೂವಿನಹಡಗಲಿ 10: ತಾಲೂಕಿನ ಹೊಳಗುಂದಿ ಗ್ರಾಮದ ಎಎಂಪಿಎಸ್ ಪ್ರೌಡ ಶಾಲೆಯ 1990- 1991 ಸಾಲಿನ ಹಳೆ ವಿದ್ಯಾರ್ಥಿಗಳು 35 ವರ್ಷಗಳ ನಂತರ ಕುಚಕು ಗೆಳೆಯರು ಸಿದ್ದೇಶ್ವರ ದೇಗುಲದಲ್ಲಿ ಭಾನುವಾರ ಎಲ್ಲರೂ ಒಂದು ಕಡೆ ಸೇರಿ ಪೂರ್ವ ಬಾವಿ ಸಭೆ ಮಾಡಲಾಯಿತು. ಸಭೆಯಲ್ಲಿ ಅಗಲಿದ ಗುರುಗಳು ಮತ್ತು ಸ್ನೇಹಿತರಿಗೆ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ಹಳೆ ವಿದ್ಯಾರ್ಥಿಗಳಾದ ಯು.ಎಂ.ಶಿವಯೋಗಿ.ಹೆಚ್.ವೀರೇಶ ಮಾತನಾಡಿ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಅಂದಿನಿಂದ ಇಲ್ಲಿಯವರೆಗೂ ಸೇವೆ ಸಲ್ಲಿಸಿದ ಗುರುಗಳಿಗೆ ಅಭಿನಂದನೆ ಸಲ್ಲಿಸಬೇಕು. ನಂತರ ವಿದ್ಯಾರ್ಥಿ ಜೀವನದ ನೂರಾರು ನೆನಪುಗಳನ್ನು ಹಂಚಿಕೊಂಡರು. ಗುರುವಿನ ಶ್ರೇಷ್ಠತೆ ವಿದ್ಯಾರ್ಥಿ ಜೀವನದಲ್ಲಿ ತಿಳಿಯುವುದಕ್ಕಿಂತ ವೃತ್ತಿ ಜೀವನದ ಪಯಣದಲ್ಲಿ ತಿಳಿಯುವುದು ಹೆಚ್ಚು ಎಂದ ಅವರು ಗುರುಗಳ ಮಾರ್ಗದರ್ಶನದಲ್ಲಿ ನಾವು ವಿದ್ಯೆ, ಸಂಸ್ಕಾರವನ್ನು ಕಲಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಸಭೆಯಲ್ಲಿ ಮೇ.18ರಂದು ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಮಾಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಹಳೆ ವಿದ್ಯಾರ್ಥಿಗಳಾದ ಅಲ್ಲಾಭಕ್ಷಿ. ಮಂಜುನಾಥ. ಎಸ್.ಬಿ.ಸಿದ್ದಲಿಂಗಪ್ಪ. ಎಂ.ಅಶೋಕ.ಎಜಿ.ಶಿವು.ಹೆಚ್.ಅಜ್ಜಪ್ಪ.ಮಲ್ಲಿಕಾರ್ಜುನ.ಬಸವರಾಜ.ದುರುಗಪ್ಪ.ಯಮನಪ್ಪ.ವಿ.ಮಲ್ಲಿ. ದಾದ್.ಬನ್ನಿಕಲ್ಲು ಕೊಟ್ರೇಶ. ಭರಮಪ್ಪ. ಹೆಚ್.ವೀರನಗೌಡ.ವಿಜಯ.ಸಿ.ಜಿ.ನಾಗರಾಜ ಇದ್ದರು. .
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 