ಪುರಸಭೆ ಬಡ್ತಿ ಅಧಿಕಾರಿ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭ
Farewell and welcome ceremony for promoted municipal officer
ಹೂವಿನಹಡಗಲಿ 19: ಪಟ್ಟಣದ ಪುರಸಭೆ ಯಲ್ಲಿ ಪಟ್ಟಣಕ್ಕೆ ಆಗಮಿಸಿದ ನೂತನ ಅಧಿಕಾರಿಗಳ ಸ್ವಾಗತ ಹಾಗೂ ಪದೋನ್ನತಿಯೊಂದಿಗೆ ಇಲ್ಲಿಂದ ವರ್ಗಾವಣೆಗೊಂಡ ಇಮಾಮ್ ಸಾಬ್ ಅವರಿಗೆ ಪುರಸಭೆ ಇಲಾಖೆ ಸಿಬ್ಬಂದಿ ಯಿಂದ ಹೃದಯಸ್ಪರ್ಶಿ ಸಮಾರಂಭ ಸೋಮವಾರ ನಡೆಯಿತು. ಕಳೆದ 20 ವರ್ಷದಿಂದ ಪುರಸಭೆ ಯಲ್ಲಿ ವ್ಯವಸ್ಥಾಪಕರಾಗಿ, ಮುಖ್ಯಾಧಿಕಾರಿ ಯಾಗಿ ಸುದೀರ್ಘ ಸೇವೆ ಸಲ್ಲಿಸಿದ ಇಮಾಮ್ ಸಾಬ್ ಪೌರಾಡಳಿತ ಅವರು ಪದೋನ್ನತಿಯೊಂದಿಗೆ ವರ್ಗಾವಣೆಗೊಂಡಿದ್ದು, ಇದೇ ವೇಳೆ ನೂತನ ಮುಖ್ಯಾಧಿಕಾರಿ ಜಿ.ಹನುಮಂತಪ್ಪ ಆಗಮಿಸಿದ
ಅವರನ್ನು ಸನ್ಮಾನಿಸಲಾಯಿತು.ಪುರಸಭೆ ಆಡಳಿತಾಧಿಕಾರಿ ಸುರೇಶ ಕುಮಾರ , ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅದ್ಯಕ್ಷ ಎ.ಕೊಟ್ರಗೌಡ, ಪತ್ರಕರ್ತ ಎಸ್. ನಿಂಗರಾಜ ಮಾತನಾಡಿ ಇಮಾಮ್ ಸಾಬ್ , ದಕ್ಷತೆ, ಪ್ರಾಣಿಕತೆ ಮತ್ತು ನಿಷ್ಠೆಯಿಂದ ಕೆಲಸ ಮಾಡಿದ ಪರಿಣಾಮವಾಗಿ ಅವರು ಇಂದು ಪದೋನ್ನತಿಯೊಂದಿಗೆ ವರ್ಗಾವಣೆಗೊಂಡಿರುವುದು ಸಂತಸದ ಸಂಗತಿ ಎಂದರು. ಪದೋನ್ನತಿಯೊಂದಿಗೆ ವರ್ಗಾವಣೆ ಗೊಂಡ ಇಮಾಮ್ ಸಾಬ್ ಸನ್ಮಾನ ಸ್ವೀಕರಿಸಿ ಮಾತನಾಡಿ ಜನತೆಯ ಪ್ರೀತಿ, ವಿಶ್ವಾಸ ತೀರಿಸಲಾಗದ ಋಣ ಎಂದ ಅವರು ಮೂಲಸೌಕರ್ಯ ಕಲ್ಪಿಸಲು ನೀಡಿದ ಸಹಕಾರ ಮರೆಯಲಾಗದು ಎಂದರು. ಇದೇ ವೇಳೆ ಪುರಸಭೆ ಮಾಜಿ ಅದ್ಯಕ್ಷೆ ಮತ್ತು ಸದಸ್ಯರು. ಸಿಬ್ಬಂದಿ ವರ್ಗದವರು ಹೃದಯ ಸ್ಪರ್ಶಿ ಸಮಾರಂಭ ಜರುಗಿತು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 