ವಿಕಲಚೇತನರೊ ಸಹ ನಮ್ಮಂತೆ ಮನುಷ್ಯರೇ - ವಿದ್ಯಾ ಕುರುವತ್ತಿ
Even the disabled are human beings like us - Vidya Kuruvatti
ವಿಕಲಚೇತನರೊ ಸಹ ನಮ್ಮಂತೆ ಮನುಷ್ಯರೇ - ವಿದ್ಯಾ ಕುರುವತ್ತಿ
ರಾಣೇಬೆನ್ನೂರು 15: ಅಂದ ಅಂಗವಿಕಲತೆ ಯಾವುದೇ ಶಾಪವೂ ಅಲ್ಲ ಪಾಪು ಅಲ್ಲ. ಇದೆಲ್ಲವೂ ದೈವ ನಿಯಮ. ವಿಕಲಚೇತನರು ಸಹ ನಮ್ಮಂತೆಯ ಮನುಷ್ಯರೇ ಅವರು ಸಹ ನಮ್ಮಂತೆ ಸಮಾನತೆಯಲ್ಲಿ ಬದುಕಬೇಕು ಎಂದು ಇನ್ನರವ್ಹಿಲ್ ಸೇವಾ ಸಂಸ್ಥೆಯ ಅಧ್ಯಕ್ಷ ವಿದ್ಯಾ ಕುರುವತ್ತಿ ಹೇಳಿದರು.
ಅವರು, ಇಲ್ಲಿನ ಸ್ನೇಹ ದೀಪ ಅಂದ ಹಾಗೂ ಅಂಗವಿಕಲರ ಸೇವಾ ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ, ಶೈಕ್ಷಣಿಕ ಪ್ರವಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪರಿಸರದಲ್ಲಿ ಅಂದ ಹಾಗೂ ಅಂಗವಿಕಲರು ಎಲ್ಲವನ್ನು ಆಸ್ವಾದಿಸುವ ಗುಣಧರ್ಮವನ್ನು ಹೊಂದಿದ್ದಾರೆ. ಪರಿಸರ ಯಾರನ್ನು ನಿರಾಕರಿಸಿಲ್ಲ. ಇದು ಸೃಷ್ಟಿ ನಿಯಮ ಹೀಗಾಗಿ ಅವರು ಸಹ ನಮ್ಮಂತೆ, ಮನ ಸಂತೋಷ ಹೊಂದುವುದು ಅಗತ್ಯವಿದೆ ಎಂದರು.
ಶಿಗ್ಗಾವಿ ಬಳಿಯ ಪಿ. ಆರ್.ಎಸ್. ವಾಟರ್ ಪಾರ್ಕಿಂಗ್ ಶೈಕ್ಷಣಿಕ ಪ್ರವಾಸಕ್ಕೆಬೆಂಗಳೂರಿನ ಇನ್ನರ್ ವ್ಹಿಲ್ ಸಂಸ್ಥೆಯು ತನ್ನ ಪ್ರಾಯೋಜಕತ್ವವನ್ನು ನೀಡಿದ್ಧರು. ಶೈಕ್ಷಣಿಕ ಪ್ರವಾಸದಲ್ಲಿ ಪಾಲ್ಗೊಂಡಿದ್ದ ಸ್ನೇಹ ದೀಪ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು, ವಿಶೇಷ ಅನುಭವದ ಮೂಲಕ ಪ್ರವಾಸವನ್ನು ಸಂಭ್ರಮಿಸಿದರು. ಸಂಸ್ಥೆಯ ಸಿಬ್ಬಂದಿಗಳು, ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 