ಹಳೆ ನೆಲ್ಲುಡಿ ಗ್ರಾಮದಲ್ಲಿ ಶ್ರದ್ಧೆಯ ಕಾಶೀಂಸಾಹೇಬ್ ಉರುಸ್ ಆಚರಣೆ
Devoted Kasheensaheb Urus celebration at Old Nelludi village
ಹಳೆ ನೆಲ್ಲುಡಿ ಗ್ರಾಮದಲ್ಲಿ ಶ್ರದ್ಧೆಯ ಕಾಶೀಂಸಾಹೇಬ್ ಉರುಸ್ ಆಚರಣೆ
ಕಂಪ್ಲಿ 30: ತಾಲೂಕಿನ ನೆಲ್ಲುಡಿ ಗ್ರಾಪಂಯ ಹಳೆ ನೆಲ್ಲುಡಿ ಗ್ರಾಮದಲ್ಲಿ ಕಾಶೀಂಸಾಹೇಬ್ ದರ್ಗಾದಲ್ಲಿ ಹಜರತ್ ಕಾಶೀಂಸಾಹೇಬ್ ದಾದರವರ 93ನೇ ವರ್ಷದ ಉರುಸ್ ಮುಭಾರಕ್ ನಿಮಿತ್ಯ ಗಂಧ, ಉರುಸ್, ಜಿಯಾರತ್ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಇಲ್ಲಿನ ದರ್ಗಾದಲ್ಲಿ ಈ ವರ್ಷವು ಸಹ ಕಾಶೀಂಸಾಹೇಬ್ ಕಮಿಟಿಯಿಂದ ಭಕ್ತರ ಸಹಯೋಗದಲ್ಲಿ ನಾನಾ ಕಾರ್ಯಕ್ರಮಗಳು ನೆರವೇರಿದವು. ಡಿ.29ರಂದು ಗಂಧ ಜರುಗಿತು. ಸೋಮವಾರದಂದು ಉರುಸ್ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಉರುಸ್ ನಿಮಿತ್ಯ ಸಾಕಷ್ಟು ಭಕ್ತರು ದರ್ಗಾಕ್ಕೆ ಆಗಮಿಸಿ, ನೈವೇದ್ಯ, ಕಾಯಿ, ಉದ್ದಿನಕಡ್ಡಿ ಅರ್ಿಸಿ, ಕಾಶೀಂಸಾಹೇಬ್ ಅವರ ಕೃಪೆಗೆ ಪಾತ್ರರಾದರು.
ಡಿ.31ರಂದು ಗ್ರಾಮದ ಹೊನ್ನೂರಸ್ವಾಮಿ ದರ್ಗಾದಿಂದ ಗಂಧವನ್ನು ಅತಿ ವಿಜೃಂಭಣೆಯಿಂದ ಪ್ರಾರಂಭಿಸಿ, ನಂತರ ದರ್ಗಾಕ್ಕೆ ಆಗಮಿಸಲಾಗುತ್ತದೆ. ನಂತರ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ. ಉರುಸ್ ಹಿನ್ನಲೆ ಶಾಸಕ ಜೆ.ಎನ್.ಗಣೇಶ್ ಅವರು ದರ್ಗಾಕ್ಕೆ ಭೇಟಿ ನೀಡಿ, ದೇವರ ಕೃಪೆಗೆ ಪಾತ್ರರಾದರು. ಹಾಗೂ ನೆಲ್ಲುಡಿ, ಎಮ್ಮಿಗನೂರು, ಬಳ್ಳಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಆಗಮಿಸಿ, ದರ್ಗಾದ ಕಾಶೀಂಸಾಹೇಬ್ ಆಶೀರ್ವಾದ ಪಡೆದರು. ದರ್ಗಾದಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಕಾಶೀಂಸಾಹೇಬ್ ಕಟಿಮಿಯವರು ಇದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 