ಅಥಣಿ ತಾಲೂಕಾ ತಾಂವಶಿ ಗ್ರಾಮ: ಸಿಲಿಂಡರ ಸ್ಪೋಟದಿಂದ ಹಾನಿ: ಕುಟುಂಬಕ್ಕೆ ಸಹಾಯ
ಸಂಬರಗಿ 15: ತಾಂವಶಿ ಗ್ರಾಮದ ಹೋರವಲಯದ ತೋಟದ ವಸತಿಯ ಯಲ್ಲಪ್ಪ ದುಂಡಪ್ಪಾ ಉಪ್ಪಾರ ಸೇರು ಒಟ್ಟು ಮೂರು ಕುಟುಂಬಗಳು ವಾಸವಾಗಿದ್ದವು. ಇವರ ಗುಡಿಸಿನಲ್ಲಿ ಗುರುವಾರ ಬೆಳಗಿನ ಜಾವ ಆಕಸ್ಮಿಕವಾಗಿ ಗ್ಯಾಸ ಸಿಲಿಂಡರ್ ಸ್ಪೋಟಗೊಂಡು ಲಕ್ಷಾಂತರ ರೂಪಾಯಿ ಹಾನಿಗೊಳಗಾದ ಕುಟುಂಬಕ್ಕೆ ಎಲ್ಲ ಗ್ರಾಮಸ್ಥರು ಕೂಡಿಕೊಂಡು ಸಹಾಯಧನವನ್ನು ಸಂಗ್ರಹಮಾಡಿ ಆ ಕುಟುಂಬಕ್ಕೆ ಸಾಂಸಾರಿಕ ಉಪಯೋಗ ವಸ್ತುಗಳು ಹಾಗೂ ವಾಸಿಸಲು ಬೇಕಾಗುವ ಸಲಕರಣೆಗಳನ್ನು ಸಹಾಯಹಸ್ತವಾಗಿ ನೀಡಿದರು.
ಗ್ರಾಮದ ಗಣ್ಯರಾದ ರಾಮಗೌಡಾ ಲಖಗೌಡರ, ಅಣ್ಣಪ್ಪಾ ಇಮಗೌಡರ್, ರಾಜು ಪರಸಗೌಡಾ ಪಾಟೀಲ, ಭೀಮಗೌಡ ಪೀರಗೌಡಾ ಪಾಟೀಲ, ಶಿವಯ್ಯ ಹೀರೆಮಠ, ಜಗದೀಶ ಲಖಗೌಡರ ಸೇರಿದಂತೆ ಅನೇಕರು ಸೇರಿ ಹಣವನ್ನು ಸಂಗ್ರಹ ಮಾಡಿ ಜೀವನೋಪಾಯದ ವಸ್ತುಗಳನ್ನು ಖರೀದಿಸಿ ನೊಂದ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ತಾಂವಶಿ ಗ್ರಾಮದ ಹೊರ ವಲಯದ ಯಲ್ಲಪ್ಪಾ ಉಪ್ಪಾರ ಇವರ ಗುಡಿಸಲು ಗ್ಯಾಸ ಸಿಲಿಂಡರ್ ಸ್ಪೋಟಗೊಡ ಕುಟುಂಬಕ್ಕೆ : ಶುಕ್ರವಾರ ಅಥಣಿ ಶುಗರ್ಸ್ ಕಾರ್ಯಕಾರಿ ನಿದರ್ೆಶಕ ಶ್ರಿನಿವಾಸ ಪಾಟೀಲ, ಅನಂತಪೂರ ಬ್ಲಾಕ್ ಅಧ್ಯಕ್ಷ ಮಹಾದೇವ ಕರೆ, ಕಾಂಗ್ರೆಸ್ ಮುಖಂಡರಾದ ಆರ್.ಎಮ್.ಪಾಟೀಲ ಭೇಟ್ಟಿ ನೀಡಿ ಸಾಂತ್ವನ ಹೇಳಿದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 