ಪಾವಣಸ್ಕರ್ ಮ್ಯೂಜಿಕ ಫೌಂಡೇಷನ್ ವತಿಯಿಂದ ಅಹೋರಾತ್ರಿ ಸಂಗೀತೋತ್ಸವ
ಲೋಕದರ್ಶನ ವರದಿ
ಕೊಪ್ಪಳ 13: ತಾಲೂಕಿನ ಕಾಟ್ರಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ವೇಳೆಯಲ್ಲಿ ಪಾವಣಸ್ಕರ್ ಮ್ಯೂಜಿಕ ಫೌಂಡೇಷನ್ ಕೊಪ್ಪಳ ವತಿಯಿಂದ ಆಷಾಢ ಏಕಾದಶಿ ನಿಮಿತ್ಯ ಅಹೋರಾತ್ರಿ ಸಂಗೀತೋತ್ಸವ ಕಾರ್ಯಕ್ರಮ ಜರುಗಿತು.
ಸ್ಥಳೀಯ ಕಲಾವಿದರಾದ ಮಾರುತಿ ಚಿತ್ರಗಾರ, ಸಮೀರ ಬಂಡಿಹಾಳ, ಪ್ರಭಾಕರ್ ಪಟವಾರಿ, ವೆಂಕಟೇಶ್ ಜ್ಯೋಷಿ, ಆಂಜನೇಯ ಗಾಂಡಿವ್ ನಾರಾಯಣದಾಸ ಸಂತೆಕಲ್ಲೂರ್ ಅಹೋರಾತ್ರಿ ಪ್ರಯುಕ್ತ ಗಾಯನ ಹಾಡಿದರೆ, ಗುರುರಾಜ್ ದಾಸ್, ಅನಂತ ಪಾವಣಸ್ಕರ, ನೇಮರಾಜ್ ಹವಳೆ ತಬಲಾ ಸಾಥಿಯಾಗಿ ಸಾಥ್ ನೀಡಿದರು. ಆಂಜನೇಯ ಗಾಂಡಿವ್, ಪ್ರಭಾಕರ್ ಪಟವಾರಿ ಹಾಮರ್ೋನಿಯಂ ನುಡಿಸಿದರು. ಬಿ.ಪಿ.ಮರಿಗೌಡರ್ ಮೂಲವಾಧ್ಯ ನುಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪಾವಣಸ್ಕರ್ ಮೂಜಿಕ್ ಫೌಂಡೇಷನ್ ಸಂಸ್ಥಯ ಶ್ಲಾಘಿಸಿದರು. ಸ್ಥಳೀಯ ಕಲಾವಿದರನ್ನು ಗುರುತಿಸಿ ಪ್ರೋತ್ಸಹಿಸಲು ಪ್ರತಿಯೊಬ್ಬ ಸಹಕಾರ ಅಗತ್ಯವಾಗಿದೆ ಎಂದರು.
ಕೊಪ್ಪಳ ಪಾಂಡುರಂಗ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮಾರ್ಕಂಡೆಪ್ಪ ಮಂಗಳಾಪುರ್ ಕಾಟ್ರಳ್ಳಿ, ಪರಸಪ್ಪ ಕರೆಕುರಿ, ಸೇರಿದಂತೆ ಕಾಟ್ರಳ್ಳಿ ಗ್ರಾಮದ ಹಿರಿಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮದ ಬಗ್ಗೆ ಅಪಾರ ಮೆಚ್ಚಿಗೆ ವ್ಯಕ್ತಪಡಿಸಿದರು. ಸಂಸ್ಥೆಯ ಕಾರ್ಯದಶರ್ಿ ಅನಂತ ಪಾವಣಸ್ಕರ್ ರವರು ಕೊನೆಯಲ್ಲಿ ಮಾತನಾಡಿ ತಮ್ಮ ಸಂಸ್ಥೆಯ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೆ ಅಭಿನಂದಿಸಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 