ಶಾಸಕರ ನೇತೃತ್ವದಲ್ಲಿ ಗೂಂಡಾಗಿರಿ’
'Goons led by MLAs'
ಬಳ್ಳಾರಿ: ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಬ್ಯಾನರ್ ವಿಚಾರದಲ್ಲಿ ನಡೆದ ಗಲಾಟೆ, ಗುಂಡೇಟು ಪ್ರಕರಣ ಇದೀಗ ರಾಜಕೀಯವಾಗಿ ಮಹತ್ವ ಪಡೆದಿದ್ದು, ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಶುಕ್ರವಾರ (ಜ.02) ಬಳ್ಳಾರಿಗೆ ಭೇಟಿ ನೀಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಭರತ್ ರೆಡ್ಡಿ ನೇತೃತ್ವದಲ್ಲಿ ಗೂಂಡಾಗಿರಿ ನಡೆದಿದೆ. ಬ್ಯಾನರ್ ವಿಚಾರದಲ್ಲಿ ದೊಂಬಿ ಎಬ್ಬಿಸಿದ್ದಾರೆ. ಗೂಂಡಾಗಳು, ಕಾರ್ಯಕರ್ತರನ್ನು ಕರೆದುಕೊಂಡು ಬಂದು ಕಲ್ಲು ಎಸೆದಿದ್ದಾರೆ. ಸತೀಶ್ ರೆಡ್ಡಿ ಎನ್ನುವ ವ್ಯಕ್ತಿಯ ಖಾಸಗಿ ಗನ್ ಮ್ಯಾನ್ ಫೈಯರ್ ಮಾಡಿಸಿದ್ದಾನೆ. ಕಾಂಗ್ರೆಸ್ ನವರಿಗೆ ನಾಚಿಕೆ ಆಗಬೇಕು ಎಂದು ಹೇಳಿದರು.
ವಾಲ್ಮೀಕಿಗೆ ಮಹತ್ವ ಕೊಡಲು ನಮ್ಮ ಹಿಂದಿನ ಸಿಎಂ ಯಡಿಯೂರಪ್ಪರನ್ನು ಮನವೊಲಿಸಿದ್ದ ಶ್ರೀರಾಮುಲು ವಾಲ್ಮೀಕಿ ಜಯಂತಿ ಮಾಡಿಸಿದ್ದರು. ಬಳ್ಳಾರಿಯಲ್ಲೂ ಜನಾರ್ದನ ರೆಡ್ಡಿ, ರಾಮುಲು ಅವರು ಈಗಾಗಲೇ ವಾಲ್ಮೀಕಿ ಪುತ್ಥಳಿ ಇಟ್ಟಿಸಿದ್ದಾರೆ. ಆದರೂ ಈಗ ರಾಜಕೀಯ ತೆವಲಿಗೆ ಬ್ಯಾನರ್ ಪೋಸ್ಟ್ ಹಾಕಿಸಿ ಗಲಾಟೆ ಮಾಡಿದ್ದಾರೆ ಎಂದರು.
ಸಿಎಂ ಹಾಗೂ ಗೃಹ ಸಚಿವರು ದ್ವೇಷ ಭಾಷಣ ಕಾಯ್ದೆ ತರಲು ಯೋಚನೆ ಮಾಡುತ್ತಾರೆ. ಮೊದಲು ನಿಮ್ಮ ಶಾಸಕ ನಾರಾ ಭರತ್ ರೆಡ್ಡಿಯನ್ನು ಮೊದಲು ಒದ್ದು ಒಳಗೆ ಹಾಕಿ. ನಿಮಗೆ ತಾಕತ್ತಿದ್ದರೆ ಮೊದಲು ಒದ್ದು ಒಳಗೆ ಹಾಕಿ, ಹೈಕೋರ್ಟ್ ಜಡ್ಜ್ ಮೂಲಕ ಸರಿಯಾದ ತನಿಖೆ ಮಾಡಿಸಿ. ಮುಂದೆ ಮತ್ತೆ ಈ ರೀತಿ ಆಗಬಾರದು ಎನ್ನುದಾದರೆ ಮೊದಲು ಸರಿಯಾಗಿ ತನಿಖೆ ಮಾಡಿಸಿ ಎಂದು ವಿಜಯೇಂದ್ರ ಹೇಳಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 