ಚಂದನ ವಾಹಿನಿಯಲ್ಲಿ 'ಗಾನ ಚಂದನ'
ಬೆಂಗಳೂರು, ಅ 03: ನಾಡಿನ ಹೆಮ್ಮೆಯ ದೂರದರ್ಶನ ಚಂದನವಾಹಿನಿಯಲ್ಲಿ ಗಾಯನ ಪ್ರತಿಭಾನ್ವೇಷಣೆಯ ವಿನೂತನ ಕಾರ್ಯಕ್ರಮ "ಗಾನ ಚಂದನ" ಪ್ರಾರಂಭವಾಗಿದೆ. ಹೆಸರಾಂತ ನಟ ರಾಘವೇಂದ್ರ ರಾಜಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಹಾಡಿ, ಶುಭ ಕೋರಿದರು. ಕರ್ನಾಟಕದ ಪ್ರತಿ ಜಿಲ್ಲೆಗಳ ನೈಜ, ಸಹಜ ಗಾನಪ್ರತಿಭೆಗಳನ್ನು ಹೆಕ್ಕಿ, ಸೂಕ್ತ ಮಾರ್ಗದರ್ಶನಗಳೊಂದಿಗೆ ಗಾಯನಕಲೆಗೆ ಉತ್ತೇಜನ ನೀಡಲಾಗುತ್ತದೆ. ದೂರದರ್ಶನದ ಭವ್ಯವಾದ ಸೆಟ್ ನಲ್ಲಿ, ಸುಪ್ರಸಿದ್ಧ ಹಿನ್ನೆಲೆ ಗಾಯಕಿ ಬಿ.ಆರ್. ಛಾಯಾ ಹಾಗೂ ಜನಪ್ರಿಯ ಸಂಗೀತ ನಿದರ್ೆಶಕ -ಸಿನೆಮಾ ಸಾಹಿತಿ ಶ್ರೀ ತ.ಮನೋಹರ್ ರ ಸಮಕ್ಷಮದಲ್ಲಿ, ವಿನೂತನ ಗಾನತಂತ್ರಗಳೊಂದಿಗೆ "ಗಾನ ಚಂದನ" ಎಲ್ಲರ ಮನೆ-ಮನಗಳಿಗೆ ಅಕ್ಟೋಬರ್ 2 ರಿಂದ ತಲುಪುತ್ತಿದೆ. ಕಿರುತೆರೆಯ ಪ್ರತಿಭಾವಂತ ಕಲಾವಿದ ಜೋಡಿ ವಿಕ್ರಂ ಸೂರಿ ಮತ್ತು ನಮಿತಾರ ನಿರೂಪಣೆಯಲ್ಲಿ ರಾತ್ರಿ 8 ರಿಂದ 9ಘಂಟೆಯವರೆಗೆ ಈ ಕಾರ್ಯಕ್ರಮ ಮೂಡಿ ಬರಲಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 