ಚಂದನ ವಾಹಿನಿಯಲ್ಲಿ 'ಗಾನ ಚಂದನ'
ಬೆಂಗಳೂರು, ಅ 03: ನಾಡಿನ ಹೆಮ್ಮೆಯ ದೂರದರ್ಶನ ಚಂದನವಾಹಿನಿಯಲ್ಲಿ ಗಾಯನ ಪ್ರತಿಭಾನ್ವೇಷಣೆಯ ವಿನೂತನ ಕಾರ್ಯಕ್ರಮ "ಗಾನ ಚಂದನ" ಪ್ರಾರಂಭವಾಗಿದೆ. ಹೆಸರಾಂತ ನಟ ರಾಘವೇಂದ್ರ ರಾಜಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಹಾಡಿ, ಶುಭ ಕೋರಿದರು. ಕರ್ನಾಟಕದ ಪ್ರತಿ ಜಿಲ್ಲೆಗಳ ನೈಜ, ಸಹಜ ಗಾನಪ್ರತಿಭೆಗಳನ್ನು ಹೆಕ್ಕಿ, ಸೂಕ್ತ ಮಾರ್ಗದರ್ಶನಗಳೊಂದಿಗೆ ಗಾಯನಕಲೆಗೆ ಉತ್ತೇಜನ ನೀಡಲಾಗುತ್ತದೆ. ದೂರದರ್ಶನದ ಭವ್ಯವಾದ ಸೆಟ್ ನಲ್ಲಿ, ಸುಪ್ರಸಿದ್ಧ ಹಿನ್ನೆಲೆ ಗಾಯಕಿ ಬಿ.ಆರ್. ಛಾಯಾ ಹಾಗೂ ಜನಪ್ರಿಯ ಸಂಗೀತ ನಿದರ್ೆಶಕ -ಸಿನೆಮಾ ಸಾಹಿತಿ ಶ್ರೀ ತ.ಮನೋಹರ್ ರ ಸಮಕ್ಷಮದಲ್ಲಿ, ವಿನೂತನ ಗಾನತಂತ್ರಗಳೊಂದಿಗೆ "ಗಾನ ಚಂದನ" ಎಲ್ಲರ ಮನೆ-ಮನಗಳಿಗೆ ಅಕ್ಟೋಬರ್ 2 ರಿಂದ ತಲುಪುತ್ತಿದೆ. ಕಿರುತೆರೆಯ ಪ್ರತಿಭಾವಂತ ಕಲಾವಿದ ಜೋಡಿ ವಿಕ್ರಂ ಸೂರಿ ಮತ್ತು ನಮಿತಾರ ನಿರೂಪಣೆಯಲ್ಲಿ ರಾತ್ರಿ 8 ರಿಂದ 9ಘಂಟೆಯವರೆಗೆ ಈ ಕಾರ್ಯಕ್ರಮ ಮೂಡಿ ಬರಲಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 