2016ರಲ್ಲಿ ಪ್ರಶಸ್ತಿ ಜಯಿಸಿದ್ದು ಐಪಿಎಲ್ ನ ನೆಚ್ಚಿನ ಕ್ಷಣ: ಡೇವಿಡ್ ವಾರ್ನರ್
ನವದೆಹಲಿ, ಏ 18, 2016ರಲ್ಲಿ
ಸನ್ ರೈರರ್ಸ್ ಹೈದರಾಬಾದ್ ತಂಡ ಪ್ರಶಸ್ತಿ ಜಯಿಸಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್
(ಐಪಿಎಲ್) ನ ನೆಚ್ಚಿನ ಹಾಗೂ ಸ್ಮರಣೀಯ ಕ್ಷಣವಾಗಿದೆ ಎಂದು ಆಸ್ಟ್ರೇಲಿಯಾ ತಂಡದ ಆರಂಭಿಕ
ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಬಹಿರಂಗ ಪಡಿಸಿದ್ದಾರೆ.2016ರಲ್ಲಿ ಸನ್ ರೈಸರ್ಸ್
ಹೈದರಾಬಾದ್ ತಂಡದ ನಾಯಕರಾಗಿದ್ದ ವಾರ್ನರ್, ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್
ಬೆಂಗಳೂರು ತಂಡವನ್ನು ಸೋಲಿಸಿ ತಂಡಕ್ಕೆ ಚಾಂಪಿಯನ್ ಪಟ್ಟ ಗೆದ್ದುಕೊಡುವಲ್ಲಿ ಮಹತ್ವದ
ಪಾತ್ರವಹಿಸಿದ್ದರು. ಪ್ರಸ್ತುತ ಎಲ್ಲಡೆ ಲಾಕ್ ಡೌನ್ ಇರುವ ಕಾರಣ ಐಪಿಎಲ್
ಫ್ರಾಂಚೈಸಿಗಳು ಸೇರಿದಂತೆ ಬಹುತೇಕ ಕ್ರೀಡಾಪಟುಗಳು ಸಾಮಾಜಿಕ ತಾಣದಲ್ಲಿ
ಸಕ್ರಿಯರಾಗಿದ್ದಾರೆ. ಐಪಿಎಲ್ ಫ್ರಾಂಚೈಸಿ ಸನ್ ರೈಸರ್ಸ್ ಹೈದರಾಬಾದ್ ಸಹ, ವಾರ್ನರ್
ಬಹಿರಂಗಪಡಿಸಿರುವ ಐಪಿಎಲ್ ನೆಚ್ಚಿನ ಕ್ಷಣದ ವಿಡಿಯೋ ತುಣಕನ್ನು ಹಂಚಿಕೊಂಡಿದೆ.''2016ರಲ್ಲಿ
ಪ್ರಶಸ್ತಿ ಜಯಿಸಿದ್ದು ಐಪಿಎಲ್ ನ ನನ್ನ ನೆಚ್ಚಿನ ಕ್ಷಣವಾಗಿದೆ. ನಾವು ಉತ್ತಮ
ಟೂರ್ನಿಯನ್ನು ಹೊಂದಿದ್ದವು. ಸಾಕಷ್ಟು ನಿಕಟವಾಗಿದ್ದ ಪಂದ್ಯಗಳನ್ನು ಗೆದ್ದಿದ್ದು ನಮ್ಮ
ತಂಡದ ಪ್ರಜ್ಞೆಯನ್ನು ಜಾಗೃತಗೊಳಿಸಿತು, ಇದೆಲ್ಲದರ ಕೊಡುಗೆ ತಂಡದ ಕೋಚ್ ಗಳಿಗೆ ಮತ್ತು
ಮಾರ್ಗದರ್ಶಕರಿಗೆ ಸಲ್ಲಬೇಕು, '' ಎಂದು ವಿಡಿಯೊದಲ್ಲಿ ವಾರ್ನರ್ ಹೇಳಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 