ಹಿಂದೂ ಸಂಪ್ರದಾಯದ ಸೂತಕ ಕ್ರಿಯೆ ಆಚರಿಸಿ ಎನ್ನುವ ಮೂಲಕ ಯಾವ ಸಂದೇಶ ನೀಡಲು ಹೊರಟಿದ್ದೀರಿ ?: ಜೆಡಿಎಸ್ ಪ್ರಶ್ನೆ
ಬೆಂಗಳೂರು, ಏ.3, ಕೊರೋನ ಭೀತಿಯಲ್ಲಿ ಇಡೀ ದೇಶ ತತ್ತರಿಸಿ, 130+ ಕೋಟಿ ಜನರು ಲಾಕ್ಡೌನ್ ಕರಾಳ ದಿನ ಕಳೆಯುತ್ತಿರುವಾಗ, ಏಪ್ರಿಲ್ 5 ರಂದು ರಾತ್ರಿ ಮನೆಯ ಒಳೆಗೆ ಎಲ್ಲ ದೀಪವನ್ನು ಆರಿಸಿ, ಮನೆಯ ಮುಂದೆ ದೀಪ ಹಚ್ಚಿ ಎಂಬ ಹಿಂದೂ ಸಂಪ್ರದಾಯದ ಸೂತಕ ಕ್ರಿಯೆಯನ್ನು ಆಚರಿಸಿ ಎಂದು ಕರೆ ಮಾಡುವ ಮೂಲಕ ದೇಶದ ಪ್ರಧಾನಿ ರವರು ಯಾವ ಸಂದೇಶವನ್ನು ನೀಡ ಬಯಸುತ್ತಿದ್ದಾರೆ? ಎಂದು ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಅಧ್ಯಕ್ಷ ಅರ್. ಪ್ರಕಾಶ್ ಪ್ರಶ್ನಿಸಿದ್ದಾರೆ.ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಂತಹ ಸಮಯದಲ್ಲಿ ಯಾವುದೇ ವೈಜ್ಞಾನಿಕವಾದ ವಿಚಾರಗಳನ್ನಾಗಲಿ, ಬಡವರ ಮತ್ತು ದಿನಗೂಲಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಹುಡಕುವ ನಿಟ್ಟಿನಲ್ಲಿ ಪ್ರಧಾನಿಯವರ ಸಂದೇಶವನ್ನು ನೀರಿಕ್ಷಿಸುತಿದ್ದ ಜನತೆಗೆ, ದೇಶವನ್ನು ಅಂಧಕಾರದತ್ತ ದೂಡುವ ಮತ್ತು ಹಿಂದೂ ಸಂಸ್ಕೃತಿಯಲ್ಲಿ ಇರುವ ಸೂತಕದ ಕ್ರಿಯೆಯನ್ನು ಪಾಲಿಸಿ ಎನ್ನುವ ಮೂಲಕ ನೀಡಿರುವ ಸಂದೇಶವನ್ನು ದೇಶದ ಜನತೆ ಚಿಂತಿಸಲಿ ಎಂದು ಅವರು ಕರೆ ನೀಡಿದ್ದಾರೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 