ಮಹನೀಯರ ತತ್ವಾದರ್ಶನ ಮೈಗೂಡಿಸಿಕೊಳ್ಳಬೇಕು

We must embrace the philosophy of the greats

ಮಹನೀಯರ ತತ್ವಾದರ್ಶನ ಮೈಗೂಡಿಸಿಕೊಳ್ಳಬೇಕು 

ಕುಕನೂರು 05: ಪಟ್ಟಣದ  ಡಾ. ಬಾಬು ಜಗಜೀವನ್ ರಾಮ್ ಅವರ ವೃತ್ತದಲ್ಲಿ ಪೂಜೆಯನ್ನು ಮಾಜಿ ಸಚಿವ ಹಾಲಪ್ಪ ಆಚಾರ್ ಸಲ್ಲಿಸಿ  ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿಯ ಶುಭಾಶಯಗಳನ್ನು ತಿಳಿಸಿದ ಅವರು ಮಹನೀಯರ ತತ್ವಾದರ್ಶನದಂತೆ ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ನೀವು ಮುನ್ನೆಡೆಯಬೇಕು ಎಂದರು.ಈ ಸಂದರ್ಭದಲ್ಲಿ ಬಿಜೆಪಿ  ತಾಲೂಕ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಸಿದ್ದು ಉಳ್ಳಾಗಡ್ಡಿ, ಕರಬಸಯ್ಯ ಬಿನ್ನಾಳ, ನಗರ ಘಟಕ ಅಧ್ಯಕ್ಷ ಬಸವರಾಜ ಹಾಳಕೇರಿ, ಬಿಜೆಪಿ ಮುಖಂಡರಾದ ಸಿ. ಎಚ್ ಪೋಲಿಸ್ ಪಾಟೀಲ್, ವೀರಣ್ಣ ಹುಬ್ಬಳ್ಳಿ, ಬಸನಗೌಡ ತೊಂಡಿಹಾಳ, ಶಿವಕುಮಾರ ನಾಗಲಾಪೂರಮಠ, ಕಾರ್ಯಕರ್ತರಾದ ಜಗದೀಶ ಸೂಡಿ, ಮಂಹಾತೇಶ ಹೂಗಾರ, ಶಂಭುಲಿಂಗಪ್ಪ ಜೋಳದ, ಕನಕಪ್ಪ ಬ್ಯಾಡರ್, ಮಲ್ಲು ಚೌದರಿ, ಜಗನ್ನಾಥ ಭೋವಿ ಇನ್ನಿತರರು ಇದ್ದರು.