ಇಂದು ಕಾದಂಬರಿಕಾರ ಭೈರ್ಪರಿಗೆ ನುಡಿನಮನ
Today, a word to the novelist Bhairava
ಲೋಕದರ್ಶನ ವರದಿ
ಇಂದು ಕಾದಂಬರಿಕಾರ ಭೈರ್ಪರಿಗೆ ನುಡಿನಮನ
ಬೆಳಗಾವಿ 12: ನಗರದ ಅಕಾಡಮಿ ಆಫ್ ಕಂಪರೇಟಿವ್ ಫಿಲಾಸಫಿ ಆ್ಯಂಡ ರಿಲಿಜನ್ ಸಂಘಟನೆಯವರು ಇದೇ ದಿನಾಂಕ 13 ಸೋಮವಾರದಂದು ಸಾಯಂಕಾಲ 5-30 ಕ್ಕೆ ಹಿಂದವಾಡಿಯ ಗುರುದೇವ ರಾನಡೆ ಮಂದಿರದ ಎ.ಸಿ.ಪಿ.ಆರ್. ಸಭಾಭವನದಲ್ಲಿ “ಖ್ಯಾತ ಕಾದಂಬರಿಕಾರ ದಿ. ಡಾ. ಎಸ್. ಎಲ್. ಭೈರ್ಪ- ನುಡಿನಮನ” ಕಾರ್ಯಕ್ರಮವನ್ನು ಹಮ್ಮಿಕೊಂಡದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ, ಲೇಖಕರಾದ ಸರಜು ಕಾಟ್ಕರ್ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ ಮತ್ತು , ಕರ್ನಾಟಕ ಉತ್ತರ ಪ್ರಾಂತದ ಆರ್.ಎಸ್.ಎಸ್. ಪ್ರಾಂತ ನಿರ್ವಾಹಕರಾದ ರಾಘವೇಂದ್ರಜಿ ಕಾಗವಾಡ ಅವರು ಆಗಮಿಸಲಿದ್ದು ನಿವೃತ್ತ ಉಪನ್ಯಾಸಕರಾದ ಡಾ. ರಾಮಕೃಷ್ಣ ಮರಾಠ ಮತ್ತು ಲೇಖಕ ಗುಂಡೇನಟ್ಟಿ ಮಧುಕರ ನುಡಿನಮನ ಸಲ್ಲಿಸಲಿದ್ದಾರೆ.
ಸಾಹಿತ್ಯಾಸಕ್ತರು, ಭೈರ್ಪ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಗೌರವ ಕಾರ್ಯದರ್ಶಿ ಮಾರುತಿ ಝಿರಲಿ ಮತ್ತು ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ಟ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 