ದೇವರ ಮುಂದಿನ ದೀಪದಿಂದ ಮನೆ ಸಂಪೂರ್ಣ ಭಸ್ಮ
The house was completely burnt by the fire next to God
ದೇವರ ಮುಂದಿನ ದೀಪದಿಂದ ಮನೆ ಸಂಪೂರ್ಣ ಭಸ್ಮ
ಹಾವೇರಿ 11: ತಾಲೂಕಿನ ಅಕ್ಕೂರ ಗ್ರಾಮದ ಕರಬಸಪ್ಪ ಈರ್ಪ ತೋಟಿಗೇರ ಇವರ ಮನೆ ಯಾರು ಇಲ್ಲದ ಸಮಯದಲ್ಲಿ ಮನೆಯಲ್ಲಿ ಇದ್ದ ದೀಪದಿಂದಲೇ ಮನೆಯು ಸಂಪೂರ್ಣವಾಗಿ ಬೆಂಕಿಗೆ ಸುಟ್ಟು ಹೋಗಿರುವ ಘಟನೆ ಜರುಗಿದೆ. ಬೆಳಗಿನ ಜಾವಾ ಮನೆಯಲ್ಲಿ ಪೂಜೆ ಮಾಡಿ ಹೊಲದ ಕೆಲಸಕ್ಕೆ ತಂದೆ-ತಾಯಿ ಹೋಗಿದ್ದರು.
ಮಕ್ಕಳು ಶಾಲೆಗೆ ಹೋಗಿದ್ದರು.ತಕ್ಷಣವೇ ಸುತ್ತಮುತ್ತಲಿನ ಜನರೆಲ್ಲ ಸೇರಿ ನೀರಿನಿಂದ ಬೆಂಕಿಯನ್ನು ನಂದಿಸಿದರು.ಕಂದಾಯ ಗ್ರಾಮ ಆಡಳಿತಾಧಿಕಾರಿ ಬಸಯ್ಯ ಮಠಪತಿ ಆಗಮಿಸಿ ಹಾನಿಯ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಹರೀಶ ಮಾಗಡಿಮಠ ಗ್ರಾಮಸ್ಥರಾದ ಮುತ್ತಣ್ಣ ಭರಡಿ,ಯಲ್ಲನಗೌಡ ಮರಿಗೌಡ್ರ,ಮಹಾದೇವಪ್ಪ ಭರಡಿ,ಉಮೇಶ್ ಹೊಸಮನಿ,ಈರಣ್ಣ ತೋಟಿಗೇರ ಮುಂತಾದವರು ಸರ್ಕಾರದಿಂದ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 