ವಿಶ್ವದ ಅತೀ ಎತ್ತರದ ಚಿನಾಬ್ ರೈಲ್ವೆ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ

PM Modi inaugurates world's highest Chenab railway bridge

ಜಮ್ಮು-ಕಾಶ್ಮೀರ 06: ಚಿನಾಬ್ನದಿಗೆ ಅಡ್ಡಲಾಗಿ ನಿರ್ಮಿಸಿರುವ ವಿಶ್ವದ ಅತೀ ಎತ್ತರದ ರೈಲ್ವೆ ಕಮಾನು ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ  ಉದ್ಘಾಟಿಸುವ ಮೂಲಕ ಕಾಶ್ಮೀರ ಕಣಿವೆಗೆ ಇನ್ನು ದೇಶದ ಇತರ ಭಾಗದ ಸಂಪರ್ಕ ಕಲ್ಪಿಸಿದಂತಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಉಧಾಂಪುರ್ನಲ್ಲಿರುವ ಏರ್ಫೋರ್ಸ್ಸ್ಟೇಷನ್ಗೆ ಆಗಮಿಸಿದ ನಂತರ ವಾಯು ಮಾರ್ಗದ ಮೂಲಕ ಚಿನಾಬ್ಸೇತುವೆ ಸ್ಥಳಕ್ಕೆ ಆಗಮಿಸಿ, ರೈಲ್ವೆ ಕಮಾನು ಸೇತುವೆಯನ್ನು ಲೋಕಾರ್ಪಣೆಗೊಳಿಸಿದ್ದರು. ಪಹಲ್ಗಾಮ್ಭಯೋತ್ಪಾದಕ ದಾಳಿ ನಂತರ ಭಾರತದ ಸೇನೆ ಪ್ರತೀಕಾರವಾಗಿ ಪಾಕ್ಮೇಲೆ ಆಪರೇಶನ್ಸಿಂದೂರ ಕಾರ್ಯಾಚರಣೆ ನಡೆಸಿದ ನಂತರ ಪ್ರಧಾನಿ ಮೋದಿ ಅವರು ನೀಡಿದ ಮೊದಲ ಭೇಟಿ ಇದಾಗಿದೆ.

ಸುಮಾರು 1,400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಚಿನಾಬ್ಸೇತುವೆಯು ವಿಶ್ವದ ಅತೀ ಎತ್ತರದ ರೈಲು ಮತ್ತು ಕಮಾನು ಸೇತುವೆಯಾಗಿದ್ದು, ನದಿಯ ತಳದಿಂದ 359 ಮೀಟರ್ಎತ್ತರವಿದೆ. ಇದು ಪ್ಯಾರಿಸ್ ಐಫೆಲ್ಟವರ್ ಗಿಂತ 35 ಮೀಟರ್ಎತ್ತರವಾಗಿದೆ. 1,315 ಮೀಟರ್ಉದ್ದದ ಸೇತುವೆ ಇದಾಗಿದೆ. ಇದು ಸಿವಿಲ್ಇಂಜಿನಿಯರಿಂಗ್ನಲ್ಲಿನ ದೇಶದ ಅದ್ಭುತ ಸೇತುವೆ ಎಂದು ಪರಿಗಣಿಸಲಾಗಿದೆ.

ಸಂದರ್ಭದಲ್ಲಿ ಕಟ್ರಾದ ಶ್ರೀಮಾತಾ ವೈಷ್ಣೋ ದೇವಿ ಮತ್ತು ಶ್ರೀನಗರ ನಡುವಿನ ಎರಡು ವಂದೇ ಭಾರತ್ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ.

ಕಟ್ರಾ-ಶ್ರೀನಗರ್ನಡುವಿನ ವಂದೇಭಾರತ್ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಿದ್ದಾರೆ. ಮಾರ್ಗವು 272 ಕಿಲೋ ಮೀಟರ್ಉದ್ದದ ಉಧಾಂಪುರ್-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಸಂಪರ್ಕ ಯೋಜನೆಯ ಬಹುಮುಖ್ಯ ಭಾಗವಾಗಿದೆ.

ಇದು 12.7 ಕಿಲೋ ಮೀಟರ್ಉದ್ದವಿದ್ದು, ಭಾರತದ ಅತಿ ಉದ್ದನೆಯ ರೈಲ್ವೆ ಸುರಂಗ ಟಿ-50ಮೂಲಕ ಸಂಚರಿಸಲಿದೆ. ಜಮ್ಮುವಿನ ಕಾಟ್ರಾದಿಂದ ಶ್ರೀನಗರ ನಡುವಿನ ಸಂಚಾರವು ವಂದೇ ಭಾರತ್ನಿಂದಾಗಿ 3ಗಂಟೆಗಳಷ್ಟು ಇಳಿಕೆಯಾಗಲಿದೆ.

ವಂದೇ ಭಾರತ್ರೈಲು ಮಾರ್ಗದಲ್ಲಿ 943 ಸೇತುವೆಗಳು, 36 ಪ್ರಮುಖ ಸುರಂಗಗಳು ಇದ್ದು, ಇದು ರೈಲು ಮಾರ್ಗದ ನಡುವಿನ ವಿಶೇಷತೆಯಾಗಿದೆ. ವಂದೇ ಭಾರತ್ರೈಲಿನಲ್ಲಿ ವಾತಾವರಣಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವ ಅತ್ಯಾಧುನಿಕ ಹೀಟರ್ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೇ ಹಿಮಪಾತದಿಂದ ತಾಪಮಾನವು ಮೈನಸ್ಡಿಗ್ರಿ ಸೆಲ್ಸಿಯಸ್ಗೆ ತಲುಪಿದ್ದಾಗಲೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೀಟರ್ಗಳಿಂದ ರಕ್ಷಣೆ ಪಡೆಯುವ ವ್ಯವಸ್ಥೆ ಇದರಲ್ಲಿದೆ.