ಭಾರತಕ್ಕೆ ಶತ್ರುಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಲು ತಿಳಿದಿದೆ; ಮೋದಿ
ನವದೆಹಲಿ, ಜೂ 28: ಭಾರತ ತನ್ನ ಸಶಸ್ತ್ರ ಪಡೆಯ ಧೈರ್ಯದ ಸ್ವಭಾವ ಮತ್ತು ಶೌರ್ಯವನ್ನು ಎಂದಿಗೂ ಮರೆಯುವುದಿಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಭಾರತಕ್ಕೆ ಸ್ನೇಹಿಯಾಗಿರಲು ತಿಳಿದಿದೆ, ಅದೇ ರೀತಿ ಶತ್ರುಗಳ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯವನ್ನೂ ಹೊಂದಿದೆ ಎಂದಿದ್ದಾರೆ. ತಮ್ಮ ಮಾಸಿಕ ಬಾನುಲಿ ಕಾರ್ಯಕ್ರಮ 'ಮನ್ ಕೀ ಬಾತ್'ನಲ್ಲಿ ಮಾತನಾಡಿದ ಅವರು, ಭಾರತ ನೆರೆ ಗಡಿ ವಿವಾದವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, ದೇಶ ಇನ್ನಷ್ಟು ಸದೃಢವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಲಡಾಕ್ನಲ್ಲಿ, ನಮಗೆ ಸವಾಲೊಡ್ಡಿದವರಿಗೆ ಸಮರ್ಥ ಪ್ರತಿಕ್ರಿಯೆ ನೀಡಲಾಗಿದೆ. ನಮ್ಮ ಶೂರ ಯೋಧರು ಅತ್ಯುನ್ನತ ತ್ಯಾಗ ಮಾಡಿದ್ದಾರೆ, ಆದರೆ, ಎದುರಾಳಿ ಮೇಲುಗೈ ಸಾಧಿಸಲು ಅನುವು ಮಾಡಿಕೊಟ್ಟಿಲ್ಲ. ನಮಗೆ ಅವರನ್ನು ಕಳೆದುಕೊಂಡಿರುವ ನೋವಿದೆ. ಅವರ ಶೌರ್ಯವೇ ದೇಶದ ಶಕ್ತಿ ಎಂದರು. ಯೋಧರ ಕುಟುಂಬಗಳು ತಮ್ಮ ಕೆಚ್ಚೆದೆಯ ಪುತ್ರರ ಸರ್ವೋಚ್ಚ ತ್ಯಾಗ ಮತ್ತು ದೇಶದ ಬಗೆಗಿನ ಅವರ ಹೆಮ್ಮೆಯ ಆಂತರಿಕ ಪ್ರಜ್ಞೆ ನಿಜವಾದ ದೇಶದ ಶಕ್ತಿಯನ್ನು ರೂಪಿಸುತ್ತದೆ. ಭಾರತ ನಮ್ಮ ಧೈರ್ಯಶಾಲಿ ಹುತಾತ್ಮರಿಗೆ ನಮಸ್ಕರಿಸುತ್ತದೆ. ಅವರು ಯಾವಾಗಲೂ ಭಾರತವನ್ನು ಸುರಕ್ಷಿತವಾಗಿರಿಸಿದ್ದಾರೆ. ಅವರ ಶೌರ್ಯವನ್ನು ಯಾವಾಗಲೂ ನೆನಪಿಸಿಕೊಳ್ಳಲಾಗುವುದು ಎಂದರು. ಗಾಲ್ವಾನ್ ಗಣಿಯಲ್ಲಿ ಹುತಾತ್ಮರಾದ ಸೇನಾ ಯೋಧರಿಗೆ ಗೌರವ ತೋರಿದ ಮೋದಿ, ಈ ಸೇನಾ ಯೋಧರು ಯಾರಿಗೂ ತಾಯಿ ಭಾರತಿಯ ಘನತೆಗೆ ಕುಂದುಂಟು ಮಾಡಲು ಅವಕಾಶ ನೀಡಲಿಲ್ಲ ಎಂದರು. ಇದರಲ್ಲಿ ಭಾರತದ ಜನರು ಕೂಡ ಪಾಲ್ಗೊಳ್ಳಬೇಕು ಮತ್ತು ಇದೊಂದು ಅಗತ್ಯ ಚಳವಳಿಯಾಗಿದೆ ಎಂದು ಹೇಳಿದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 