ಅಪರಾಧಿಗಳಿಗೆ ಗಲ್ಲು : ನಿರ್ಭಯಾ ಪೂರವಿಕರ ಗ್ರಾಮದಲ್ಲಿ ಸಂಭ್ರಮಾಚರಣೆ
ಬಲ್ಲಿಯಾ, ಮಾ 20,ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಇಂದು ಬೆಳಗ್ಗೆ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆ ಜಾರಿಯಾದ ಬೆನ್ನಲ್ಲೇ ನಿರ್ಭಯಾ ಪೂರ್ವಿಕರ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು.ಉತ್ತರ ಪ್ರದೇಶದ ಮರ್ವಾರಾ ಕಾಲಾ ಗ್ರಾಮಸ್ಥರು ಪರಸ್ಪರ ಸಿಹಿ ಹಂಚಿ, ಹೋಳಿ ಆಚರಿಸಿದರು. “ಮುಸುಕಿದ್ದ ಕತ್ತಲೆ ಇಂದು ಬೆಳಗಿನ ಜಾವ ಸರಿದಿದೆ. ಈ ವರ್ಷ ಗ್ರಾಮದಲ್ಲಿ ಯಾರೂ ಸಹ ಹೋಳಿ ಆಚರಿಸಿರಲಿಲ್ಲ. ಆದರೆ ಈಗ ಎಲ್ಲರೂ ಬಣ್ಣದಲ್ಲಿ ಮೀಯುತ್ತಿದ್ದಾರೆ” ಎಂದು ನಿರ್ಭಯಾಳ ಅಜ್ಜ ಲಾಲ್ ಜಿ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ. "ಕಾಮುಕರನ್ನು ಗಲ್ಲಿಗೇರಿಸಿದ ಕ್ರಮ ಪ್ರತಿಯೊಬ್ಬ ಹೆಣ್ಣಿಗೆ ಸಂದ ಅಭಿನಂದನೆಯಾಗಿದೆ. ದೇಶದ ಮಹಿಳೆಯರು ನನ್ನ ಮೊಮ್ಮಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದು, ಹಲವು ವರ್ಷಗಳಬಳಿಕವಾದರೂ ನ್ಯಾಯ ದೊರಕಿದೆ" ಎಂದು ಲಾಲ್ ಜಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 