ಶಿಕ್ಷಣ ಪ್ರೇಮಿ ಕಮಲಮ್ಮ ಅಗಡಿಯವರ ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅನನ್ಯ ಕೊಡುಗೆ

ಶಿಕ್ಷಣ ಪ್ರೇಮಿ ಕಮಲಮ್ಮ ಅಗಡಿಯವರ ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅನನ್ಯ ಕೊಡುಗೆ Education lover Kamalamma Agadi's unique contribution to social service and education

ಲಕ್ಷ್ಮೇಶ್ವರ 01: ಸಮಾಜ ಬದಲಾವಣೆಯ ಕನಸು ಕಾಣುವುದು ಸುಲಭ ಆದರೆ, ಕಂಡ ಕನಸನ್ನು ಸಾಕಾರಗೊಳಿಸಲು ಮಾಡುವ ಪ್ರಯತ್ನಗಳು ಅಷ್ಟೇನು ಸುಲಭವಾಗಿರುವುದಿಲ್ಲ. ಈ ನಿಟ್ಟಿನಲ್ಲಿ ಲಕ್ಷ್ಮೇಶ್ವರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತಾಂತ್ರಿಕ ಶಿಕ್ಷಣ ನೀಡುವ ಮಹಾದಾಸೆಯಿಂದ ಲಕ್ಷ್ಮೇಶ್ವರದಲ್ಲಿ   ಕಮಲಾ ಮತ್ತು   ವೆಂಕಪ್ಪ ಎಂ. ಅಗಡಿ ಇಂಜನೀಯರಿಂಗ್ ಮಹಾವಿದ್ಯಾಲಯ ಸ್ಥಾಪಿಸುವಲ್ಲಿ ದಿವಂಗತ ಶ್ರೀ ವೆಂಕಪ್ಪ ಎಂ. ಅಗಡಿಯವರಿಗೆ ಬೆನ್ನೆಲುಬಾಗಿ ನಿಂತು ಅವರ ಕನಸು ಸಾಕಾರಗೊಳಿಸಿದವರು ಅವರ ಧರ್ಮಪತ್ನಿ   ಕಮಲಮ್ಮ ವಿ. ಅಗಡಿಯವರು ಎಂದು ಅಗಡಿ ಇಂಜಿನಿಯರಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಪರಶುರಾಮ್ ಬಾರ್ಕಿಅವರು ಅಭಿಪ್ರಾಯಪಟ್ಟರು. ಅವರು ಪಟ್ಟಣದ ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿಗಳಾದ   ಕಮಲಮ್ಮ ವಿ ಅಗಡಿ ಅವರ 88ನೇ ಜನ್ಮದಿನದ ಅಂಗವಾಗಿ ಎನ್‌ಎಸ್‌ಎಸ್ ಘಟಕ ಹಾಗೂ ಅದ್ವಿತಾ ಲೇಡೀಸ್ ಕ್ಲಬ್ ವತಿಯಿಂದ ಜರುಗಿದ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಅವರು ಅಗಡಿ ಸಂಸ್ಥೆಯವರ ಶಿಕ್ಷಣ, ಆರೋಗ್ಯ ಹಾಗೂ ಧಾರ್ಮಿಕ ಸೇವೆ ಸಮಾಜಕ್ಕೆ ಅನನ್ಯವಾದ ಕೊಡುಗೆ ನೀಡಿದೆ . ಈ ನಿಟ್ಟಿನಲ್ಲಿ ಅವರ ಸೇವೆ ಸಾರ್ಥಕವಾಗಿದೆ ಎಂದರು. ಸಮಾರಂಭದಲ್ಲಿ ಮುಖ್ಯ ಆಡಳಿತ ಅಧಿಕಾರಿ ಪ್ರೊ ವಿಕ್ರಂ ಶಿರೋಳ್, ಶೈಕ್ಷಣಿಕ ವಿಭಾಗದ ಮುಖ್ಯಸ್ಥರಾದ ಡಾ ಸುಭಾಸ್ ಮೇಟಿ, ಡಾ. ಆರ್ ಎಂ ಪಾಟೀಲ, ರವಿ ಪ್ರಕಾಶ್, ಪ್ರೊ ಪ್ರಕಾಶ್ ಹೊಂಗಲ, ಪ್ರೊ ಸೋಮಶೇಖರ ಕೆರಿಮನಿ, ಪ್ರೊ ರಾಜೇಶ್ವರಿ ಗಾಮನಗಟ್ಟಿ, ಎಲ್ಲ ವಿಭಾಗಗಳ ಮುಖ್ಯಸ್ಥರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರೊ ಸಾವಿತ್ರಿ ವಾಲಿ ಸರ್ವರನ್ನು ಸ್ವಾಗತಿಸಿದರು,ಪ್ರೊ ಕಿರಣ್ ಕೋತಿನ ವಂದಿಸಿದರು ವಿದ್ಯಾರ್ಥಿಗಳಾದ ಸಾನಿಯಾ,ಸುಚಿತ್ರಾ ಸವಿತಾ, ರಮೇಶರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು