ದೀಪಾವಳಿ ಪೂಜಾ ಕಾರ್ಯಕ್ರಮ
Diwali Puja Program
ಹುಬ್ಬಳ್ಳಿ 30: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ರಾಧಾಕೃಷ್ಣಗಲ್ಲಿಯಲ್ಲಿರುವ ಸುದೀರ್ಘ ನೂರು ವರ್ಷದ ಇತಿಹಾಸವಿರುವ ನ್ಯಾಶನಲ್ ಸ್ಟುಡಿಯೋ ಮಾಲಿಕರಾದ ಅಮಿತ ಹಬೀಬ ಅವರ ವಿಶೇಷ ಆಹ್ವಾನ ಮೇರೆಗೆ ದೀಪಾವಳಿ ಪೂಜಾ ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಅವರು ಭಾಗವಹಿಸಿದ್ದರು.
1925ರಲ್ಲಿ ಹುಬ್ಬಳ್ಳಿಯ ವಾಳ್ವೇಕರ ಗಲ್ಲಿಯ ನಿವಾಸಿ, ಛಾಯಾಗ್ರಾಹಕ ಮತ್ತು ಚಿತ್ರಕಲಾವಿಧರಾಗಿದ್ದ ಶ್ರೀನಿವಾಸಾಚಾರ್ಯ ಆದವಾನಿ ಅವರು ಪ್ರಾರಂಬಿಸಿದ್ದರು. 1972ರ ನಂತರ ಹನುಮಂತ ಆದವಾನಿ ಅವರು ಕೆಲವು ವರ್ಷ ಸ್ಟುಡಿಯೋ ನಡೆಸಿದರು. ಸ್ಟುಡಿಯೋದಲ್ಲಿ ಕೆಲಸಗಾರರಾಗಿದ್ದ ರಾಮಾಸಾ ಹಬೀಬ ಅವರ ಮಗ ವೆಂಕಟೇಶ ಹಬೀಬ ಅವರಿಗೆ ಇಡೀ ನ್ಯಾಶನಲ್ ಸ್ಟುಡಿಯೋವನ್ನು ಒಪ್ಪಿಸಿದರು. ಅಂದಿನಿಂದ ವೆಂಕಟೇಶ ಹಬೀಬ, ಪತ್ನಿ ಶೋಭಾ ಹಾಗೂ ಮಕ್ಕಳಾದ ಅಮೀತ್, ಅಕ್ಷಯ ಅವರು ನ್ಯಾಶನಲ್ ಸ್ಟುಡಿಯೋವನ್ನು ಅತ್ಯಂತ ವ್ಯವಸ್ಥಿತವಾಗಿ, ಹೊಸ ತಂತ್ರಜ್ಞಾನ ಬಳಿಸಿಕೊಂಡು ಮುಂದುವರೆಸಿಕೊಂಡು ಹೊಗುತ್ತಿದ್ದಾರೆ. ಹೊಸ ತಲೆಮಾರಿನ, ಉತ್ಸಾಹಿ ಯುವಕ ಅಮೀತ್ ಹಬೀಬ ಅವರಿಗೆ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಗ್ರಂಥ ನೀಡಿ ಅಭಿನಂದನೆಗಳನ್ನು ತಿಳಿಸಿದರು. ನ್ಯಾಶನಲ್ ಸ್ಟುಡಿಯೋವನ್ನುಇನ್ನಷ್ಟು ಉತ್ತುಂಗಕ್ಕೆ ತೆಗೆದುಕೊಂಡು ಹೋಗುವಂತಾಗಲಿ ಎಂದು ಶುಭ ಕೋರಿದರು. ಅಮೀತ್ ಅವರ ಪತ್ನಿ ಶ್ವೇತಾ ಹಬೀಬ, ಪುತ್ರಿ, ಮುಂತಾದವರು ಇದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 