ಸಡಗರ, ಸಂಭ್ರಮದಿಂದ ಜರುಗಿದ ಚಾಂಗದೇವರ ಜಾತ್ರೆ

ಸಡಗರ, ಸಂಭ್ರಮದಿಂದ ಜರುಗಿದ ಚಾಂಗದೇವರ ಜಾತ್ರೆ  Changadevara fair held with pomp and celebration

ಬೀಳಗಿ 08: ಸ್ಥಳೀಯ ಯಮನೂರೇಶ್ವರ ಚಕ್ರವರ್ತಿ ಚಾಂಗದೇವರ ಜಾತ್ರೆಯು ಸಡಗರ, ಸಂಭ್ರಮದಿಂದ ನಡೆಯಿತು.ಜಾತ್ರೆಯ ಅಂಗವಾಗಿ ರಂಜಿತ ಘೋರೆ​‍್ಡ ಅವರ ಮನೆಯಿಂದ ಗಂಧ (ಸಂದಲ್) ವನ್ನು ಶನಿವಾರ ರಾತ್ರಿ ವಿವಿಧ ವಾದ್ಯಗಳೊಂದಿಗೆ ಹಿಂದು-ಮುಸ್ಲಿಂ ಬಾಂಧವರು ಯಮನೂರೇಶ್ವರ ದೇವಸ್ಥಾನಕ್ಕೆ ಒಯ್ದರು. ನಂತರ ಹಿರಿಯರ ನೇತೃತ್ವದಲ್ಲಿ ಗಂಧ ಎರಿಸುವ ಕಾರ್ಯಕ್ರಮ ನೆರವೇರಿತು.ಪ್ರತಿ ವರ್ಷವೂ ಅತಿ ವಿಜೃಂಭಣೆಯಿಂದ ಉರುಸ್ ಕಾರ್ಯಕ್ರಮ ಜರಗುತ್ತದೆ. ಹಿಂದೂ ಮುಸ್ಲಿಂ ಸಮುದಾಯದವರು ಈ ಉರಸ್ ನ್ನು ಆಚರಿಸುತ್ತಾರೆ. ಮಹಾತ್ಮರ ಈ ದರ್ಗಾವು ಧಾರ್ಮಿಕ, ಸಾಮಾಜಿಕ ಭಾವೈಕ್ಯ ಸಂಕೇತವಾಗಿ ಗುರುತಿಸಿಕೊಂಡಿವೆ.

ಭಾನುವಾರ ಬೆಳಿಗ್ಗೆಯಿಂದಲೇ ಬೀಳಗಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಜನರು ಕುಟುಂಬ ಸದಸ್ಯರೊಂದಿಗೆ ಯಮನೂರೇಶ್ವರ ದರ್ಗಾಕ್ಕೆ ತೆರಳಿ ಪೂಜೆ ಸಲ್ಲಿಸಿ ಸಕ್ಕರೆ, ಲೋಬಾನ ಕೊಡುವ ಮೂಲಕ ಹರಕೆ ತೀರಿಸಿದರು.ರಂಜಿತ ಘೋರೆ​‍್ಡ, ಆಕರ್ಷ ಘೋರೆ​‍್ಡ, ಶಂಕರ ಬಡಿಗೇರ, ಶ್ರೀಶೈಲ ದಳವಾಯಿ, ಲಕ್ಷ್ಮಣ ತೋಟದ,ಹುಸೆನಸಾಬ ಬಳೂತಿ, ಸಂಗಪ್ಪ ಕಟಗೇರಿ,ಅಡಿವೆಪ್ಪ ಕೆರೂರ, ಮೈನುಸಾಬ್ ತಹಶೀಲ್ದಾರ್,ಸಂತೋಷ ಜಂಬಗಿ, ಇಸ್ಮಾಯಿಲ್ ಕಮತರ ಮನಸುರ್ ಕಾಲೆಬಾವಗೋಳ, ಮೇಹಬೂಬ ಮಕಾಂದಾರ, ಸುನಿಲ ಸಿದ್ದಾಪುರ,ದೀಲಿಪ ಮರಾಠೆ, ನಿಂಗಪ್ಪ ಗಾಂಜಿ,ಶಿವು ವಸ್ತ್ರದ ಇದ್ದರು.