ಮುಕ್ತಿಮಂದಿರ ಸ್ವಾಮಿಗಳ ಆಶೀರ್ವಾದ ಪಡೆದ ಚಂದ್ರಶೇಖರ್

ಮುಕ್ತಿಮಂದಿರ ಸ್ವಾಮಿಗಳ ಆಶೀರ್ವಾದ ಪಡೆದ ಚಂದ್ರಶೇಖರ್ Chandrashekhar receives blessings from Muktimandir Swami

ಲಕ್ಷ್ಮೇಶ್ವರ 08: ಅನ್ನದಾತರ ನೋವು ನಲಿವುಗಳನ್ನು ಸರ್ಕಾರ ಗಮನ ಸೆಳೆದು ಪರಿಹಾರ ಕೊಂಡುಕೊಳ್ಳುವ ಮೂಲಕ ರೈತರ ಸಮಸ್ಯೆಗಳನ್ನು ದೂರ ಮಾಡುತ್ತಿರುವ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ ಟಿ ಚಂದ್ರಶೇಖರ್ ಸೋಮವಾರ ಭೂಕೈಲಾಸ ಮುಕ್ತಿಮಂದಿರ ಧರ್ಮ ಕ್ಷೇತ್ರಕ್ಕೆ ಭೇಟಿ ನೀಡಿ ಮಹಾತಪಸ್ವಿ, ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಲಿಂ. ಶ್ರೀ ವೀರಗಂಗಾಧರ ಜಗದ್ಗುರುಗಳ ಕರ್ತೃ ಗದ್ದಿಗೆಗೆ ಪೂಜೆ ಸಲ್ಲಿಸಿ ಇಂದಿನ ಮುಕ್ತಿಮಂದಿರ ಧರ್ಮ ಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲ ರೇಣುಕ ವೀರಮಕ್ತಿಮುನಿ ಸ್ವಾಮಿಗಳಿಂದ ಆಶೀರ್ವಾದ ಪಡೆದುಕೊಂಡರು.ಮುಕ್ತಿಮಂದಿರ ಶ್ರೀ ಗಳೊಂದಿಗೆ ಪ್ರಸ್ತುತ ದಿನಮಾನಗಳಲ್ಲಿ ಅನ್ನದಾತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮತ್ತು ಅವುಗಳ ಸುಧಾರಣೆಗೆ ರೈತೋದಯ ಹಸಿರು ಸೇನೆ ಕೈಗೊಳ್ಳಬೇಕಾದಸೂಕ್ತ ಮಾರ್ಗದರ್ಶನ ಸಲಹೆ ಗಳನ್ನು ಶ್ರೀಗಳೊಂದಿಗೆ ಪಡೆದುಕೊಂಡ ಅವರು ಮೀಸಲು ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಗಳಲ್ಲಿರುವ ಕುಂದು ಕೊರತೆ ರೈತರು ಜಮೀನುಗಳಿ ತೆರಳುವ ರಸ್ತೆ ಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ ಎಂದರು. 

ಅವರು ಶಿರಹಟ್ಟಿ ಮತಕ್ಷೇತ್ರದ ತಾಲೂಕಿನ ಎಲ್ಲ ರೈತ ಸಂಘಟನೆಗಳ ಮುಖಂಡರೊಂದಿಗೆ, ರೈತರಿಗೆ ಭೇಟಿಯಾಗಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದು ಅವರಿಗೆ ನಮ್ಮ ರೈತೋದಯ ಹಸಿರು ಸೇನೆ ಯಾವಾಗಲೂ ನಿಮ್ಮ ಬೆನ್ನ ಹಿಂದೆ ಇರುತ್ತದೆ ಎಂದು ಅವರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ತಾಲೂಕಿನಲ್ಲಿ ಸಂಚರಿಸಿದರು. 

ಈ ಸಮಯದಲ್ಲಿ ರೈತೋದಯ ಸಸಿರು ಸೇನೆ ರಾಜ್ಯ ಸಂಚಾಲಕರಾದ ಗಂಗಮ್ಮ ಸೇರಿದಂತೆ ಇತರರು ಇದ್ದರು