ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ
CC road and sewerage construction work in Scheduled Caste colonies
ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ
ರಾಯಬಾಗ 02 : ಪಟ್ಟಣ ಪಂಚಾಯತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಸೋಮವಾರ ಸಂಸದೆ ಪ್ರೀಯಂಕಾ ಜಾರಕಿಹೊಳಿ ಹಾಗೂ ಶಾಸಕ ಡಿ.ಎಮ್. ಐಹೊಳೆ ಜಂಟಿಯಾಗಿ ಚಾಲನೆ ನೀಡಿದರು.ಶಾಸಕ ಡಿ.ಎಮ್. ಐಹೊಳೆ ಮಾತನಾಡಿ, ಈಗಾಗಲೇ ರಾಯಬಾಗ ಪಟ್ಟಣದ ಅಭಿವೃದ್ಧಿಗಾಗಿ ಅನೇಕ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಆದ್ಯತೆ ಮೇರೆಗೆ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲಾಗುವುದು, ಈಗ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 1 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ ನಗರ ಮತ್ತು ವಿವೇಕ ನಗರದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಮಹಾವೀರ ಮೊಹಿತೆ, ಸದಾಶಿವ ಘೋರೆ್ಡ, ಹಾಜಿ ಮುಲ್ಲಾ, ಹರೀಶ ಕುಲಗುಡೆ, ಅರ್ಜುನ ಬಂಡಗಾರ, ಅಣ್ಣಾಸಾಹೇಬ ಖೇಮಲಾಪುರೆ, ತಮ್ಮಾಣಿ ನಿಂಗನೂರೆ, ಸದಾನಂದ ಹಳಿಂಗಳಿ, ಜ್ಯೋತಿ ಕೆಂಪಟ್ಟಿ, ಕಿರಣ ಕಾಂಬಳೆ, ಮಹೇಶ ಕರಮಡಿ, ದೀಲೀಪ ಪಾಯನ್ನವರ, ಇಲಾಹಿ ಶೇಖ, ಸದಾಶಿವ ಮುರಗುಡೆ, ಕಾಡೇಶ ಐಹೊಳೆ,ಲೋಕೇಶ ಕಾಂಬಳೆ, ಚೇತನ ಕಾಂಬಳೆ, ಉದಯ ಕುಳ್ಳೋಳಿ, ತನುಜಾ ಶಿಂಗೆ, ದೀಲೀಪ ಜಮಾದಾರ, ಭಾರತಿ ಲೋಹಾರ ಸೇರಿದಂತೆ ಅನೇಕರು ಇದ್ದರು.ಫೋಟೊ: 02 ರಾಯಬಾಗ 1ಫೋಟೊ ಶೀರ್ಷಿಕೆ: ರಾಯಬಾಗ: ಪಟ್ಟಣದ ಅಂಬೇಡ್ಕರ ನಗರದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಮ್. ಐಹೊಳೆ ಚಾಲನೆ ನೀಡಿದರು. ಸಂಸದೆ ಪ್ರೀಯಂಕಾ ಜಾರಕಿಹೊಳಿ, ಮಹಾವೀರ ಮೊಹಿತೆ, ಸದಾಶಿವ ಫೋರೆ್ಡ, ಹಾಜಿ ಮುಲ್ಲಾ, ಭಾರತಿ ಲೋಹಾರ ಇತರರು ಇದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 