ವೈನ್ಸ್ ಅಂಗಡಿಯ ಮುಂದೆ ಮದ್ಯಪ್ರಿಯರ ಸಾಲು
ಕುರುಗೋಡು04: ಕೊರೋನಾ ವೈರಸ್ ಭೀತಿಯಿಂದ ದೇಶವೇ ಲಾಕ್ ಡೌನ್ನ ಹಿನ್ನೆಲೆಯಲ್ಲಿ ಅಂದಾಜು 42 ದಿನ ಮದ್ಯದಂಗಡಿಗಳಿಲ್ಲದೆ ಕಂಗಾಲಾಗಿದ್ದ ಮದ್ಯಪ್ರಿಯರಿಗೆ ಇಂದಿನಿಂದ ಮದ್ಯದಂಗಡಿಗಳನ್ನು ತರೆದಿದ್ದು ಸ್ವರ್ಗವೇ ಸಿಕ್ಕಂತಾಗಿದೆ. ಬೆಳಿಗ್ಗೆಯಿಂದ ಕುರುಗೋಡು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮದ್ಯಪ್ರಿಯರು ಸಾಲು ನಿಂತು ಮದ್ಯ ಖರಿಧಿಸುವ ದೃಶ್ಯ ನಾನಾ ಕಡೆ ಕಂಡುಬಂತು.
ಮದ್ಯಪ್ರಿಯರಿಗೆ ಮದ್ಯದೆಂಗಡಿ ತೆರಿದಿರುವ ಸಂತಸ ಒಂದೆಡೆ ಆದರೆ ಅಂಗಡಿಯವರು ಒಬ್ಬರಿಗೆ ಎರಡು ಬಾಟಲ್ ಕೊಡುವದರಿಂದ ತುಸು ಬೇಜಾರಾಗಿದ್ದಾರೆ. ಇನ್ನೂ ಬಾಟಲ್ಗಳು ಕೊಟ್ಟರೆ ಮತ್ತೆ ಮತ್ತೆ ಅಂಗಡಿಗೆ ಬರದೇ ಮನೆಯಲ್ಲಿರುತ್ತೇವೆ ಎಂಬ ಮಾತುಗಳು ವಅುದ್ಯಪ್ರಿಯರಿಂದ ಕೇಳಿಬಂದವು.
ಬೆಳಿಗ್ಗೆ ಮದ್ಯ ಖರೀದಿಸಲು ಅಂಗಡಿ ಮುಂದೆ ಮದ್ಯಪ್ರಿಯರು ಗುಂಪು ಗುಂಪಾಗಿ ಸರತಿ ನಿಂತು ನಾ ಮುಂದು ನೀ ಮುಂದು ಎನ್ನುವ ನೂಕುನುಗ್ಗಲಿನಿಂದ ಜನಜಂಗುಳಿ ತುಂಬಿತ್ತು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಅಂಗಡಿಗಳಿಗೆ ಭೇಟಿ ನೀಡಿ, ಮಾಸ್ಕ್ ಇಲ್ಲದೆ ಬಾಟಲ್ ಖರೀದಿಸಲು ಬಂದಿರುವವರಿಗೆ ಹಿಂದಕ್ಕೆ ಕಳುಹಿಸಿದರು ಹಾಗೂ ಸಾಮಾಜಿಕ ಅಂತರ ಕಾಪಾಡಬೇಕು, ಸ್ಯಾನಿಟೈಜರ್ ಉಪಯೋಗಿಸಬೇಕು ಹಾಗೂ ಇನ್ನಿತರ ವೈರಸ್ ಜಾಗೃತಿ ಕುರಿತು ಸಲಹೆ ನೀಡಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 