ನಮ್ಮೂರ ಬಾನುಲಿ ರೇಡಿಯೋದಲ್ಲಿ ಶ್ರೀ ಸಿದ್ದಬಸವ ದೇವರ ಸಂದರ್ಶನ
Interview of Shri Siddha Basava Dev on Nammura Banuli Radio
ಯಮಕನಮರಡಿ, 30 : ಹುಕ್ಕೇರಿ ತಾಲ್ಲೂಕಿನ ಕರಗುಪ್ಪಿ-ಯಲ್ಲಾಪುರದಲ್ಲಿರುವ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ 90.8 ಎಫ್ಎಂನಲ್ಲಿ ಶನಿವಾರ ವಿಶೇಷ ಸಂದರ್ಶನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಶೂನ್ಯ ಸಂಪಾದನಾ ಪೀಠ, ಹುಣಸಿಕೊಳ್ಳ ಮಠ, ಯಮಕನಮರಡಿ ಅವರ ಪೂಜ್ಯ ಶ್ರೀ ಸಿದ್ದಬಸವ ದೇವರು ಅವರು “ಅನುಭವ ಮಂಟಪದ ಆಡಳಿತ” ವಿಷಯದ ಕುರಿತು ತಮ್ಮ ದಾರ್ಶನಿಕ ಚಿಂತನೆಗಳು ಮತ್ತು ಸಾಮಾಜಿಕ ದೃಷ್ಟಿಕೋಣಗಳನ್ನು ಹಂಚಿಕೊಂಡರು.
ಶ್ರೀಗಳು ಅನುಭವ ಮಂಟಪದ ಐತಿಹಾಸಿಕ ಹಿನ್ನೆಲೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಮೇಲೆ ಆಧಾರಿತ ಅದರ ಆಡಳಿತ ಮಾದರಿ ಹಾಗೂ ಇಂದಿನ ಆಡಳಿತ ವ್ಯವಸ್ಥೆಗೆ ಅದರ ಪ್ರಸ್ತುತತೆಯನ್ನು ಸರಳವಾಗಿ ವಿವರಿಸಿದರು. ಅವರ ವಿಚಾರಧಾರೆಗಳು ಶ್ರೋತೃಗಳಲ್ಲಿ ಚಿಂತನೆಗೆ ಪ್ರೇರಣೆ ನೀಡುವಂತಾಗಿದ್ದು, ಕಾರ್ಯಕ್ರಮವು ಜ್ಞಾನವರ್ಧಕ ಸಂಭಾಷಣೆಯಾಗಿ ಮೂಡಿಬಂದಿತು.
ಈ ವೇಳೆ ಪೂಜ್ಯ ಶ್ರೀ ಸಿದ್ದಬಸವ ದೇವರಿಗೆ ಸತ್ಕಾರ ನೆರವೇರಿಸಲಾಯಿತು. ಜೊತೆಗೆ ಆರ್ಜೆ ಮೀರಾ ಅವರು ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ವಿವಿಧ ಕಾರ್ಯಕ್ರಮಗಳ ಕುರಿತು ಪರಿಚಯ ನೀಡಿ ಮಾಹಿತಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕರಾದ ಎಂ.ಎಸ್. ಚೌಗಲಾ, ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ನಿರೂಪಕರಾದ ಆರ್ಜೆ ಚೇತನ, ಆರ್ಜೆ ಮೀರಾ, ಸಂದರ್ಶಕರಾದ ಡಾ. ಶ್ರೀರಂಗ ಜೋಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 