ಲಂಬಾಣಿ ಸಮುದಾಯ ’ದುಶ್ಚಟಕ್ಕೆ ಬಲಿಯಾಗಬೇಡಿ
Don't fall prey to Lambani community' evil
ಲಂಬಾಣಿ ಸಮುದಾಯ ’ದುಶ್ಚಟಕ್ಕೆ ಬಲಿಯಾಗಬೇಡಿ
ಹೂವಿನಹಡಗಲಿ 16 : ಸಂತ ಸೇವಾಲಾಲ್ ಅವರು ಲಂಬಾಣಿ ಸಮುದಾಯವನ್ನುದುಶ್ಚಟಮುಕ್ತಗೊಳಿಸುವ ಚಿಂತನೆ ಹೊಂದಿದ್ದರು. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಸಂತರಿಗೆ ಗೌರವ ತರಬೇಕು’ ಎಂದು ಶಾಸಕ ಎಲ್.ಕೃಷ್ಣನಾಯ್ಕ ಹೇಳಿದರು.ತಾಲ್ಲೂಕು ಪಂಚಾಯಿತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.’ಸತ್ಯ, ನಿಷ್ಠೆ, ಜ್ಞಾನದ ಸಂಕೇತವಾಗಿದ್ದ ಸೇವಾಲಾಲ್ ತಮ್ಮ ನಡೆ, ನುಡಿಯಿಂದ ಧಾರ್ಮಿಕ, ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಈ ಸಂತನನ್ನು ಜಾತಿಗೆ ಸೀಮತಗೊಳಿಸದೇ ಎಲ್ಲ ಸಮುದಾಯದವರು ಗೌರವಿಸುವಂತಾಗಬೇ-ಕು’ ಎಂದರು.ತಾ.ಪಂ. ಇಒ ಎಂ. ಉಮೇಶ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮುಖಂಡರಾದ ವಾರದ ಗೌಸ್ ಮೊಹಿದ್ದೀನ್, ಬಿ. ತೋಟನಾಯ್ಕ, ಎಲ್. ಸೋಮಿನಾಯ್ಕ, ಎನ್.ಶ್ರೀಧರನಾಯ್ಕ, ಡಾ.ಲಕ್ಷ್ಮಣನಾಯ್ಕ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್, ಎನ್. ಕೋಟೆಪ್ಪ, ಹಣ್ಣಿ ಶಶಿಧರ, ಸಿರಾಜ್ ಬಾವಿಹಳ್ಳಿ, ಚಂದ್ರನಾಯ್ಕ, ಮೀರಾಬಾಯಿ, ಪುಷ್ಪಾ ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 