ಸಡಗರದ ನಾಗರ ಪಂಚಮಿ ಆಚರಣೆ
ಹಾವೇರಿ: ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ರವಿವಾರ ನಾಗರ ಪಂಚಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹೊಸ ಬಟ್ಟೆ ತೊಟ್ಟ ಮಕ್ಕಳು, ಮಹಿಳೆಯರು ವಿವಿಧೆಡೆ ನಾಗ ದೇವರ ಮಂದಿರ ಮತ್ತು ಹುತ್ತಗಳಿಗೆ ತೆರಳಿ ಹಾಲೆರೆದು ಭಕ್ತಿಯನ್ನು ಮೆರೆದರು. ಹುತ್ತಕ್ಕೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು.
ಮಕ್ಕಳು, ಮಹಿಳೆಯರು, ವೃದ್ಧೆಯರು ಸೇರಿದಂತೆ ಎಲ್ಲ ವರ್ಗದ ವಯೋಮಾನದವರು ಗ್ರಾಮದ ಆರಾಧ್ಯ ದೈವ ನೆಲೆಸಿರುವ ಹಾಲಸ್ವಾಮಿ ಮಠ, ದುಗರ್ಾದೇವಿ ದೇವಸ್ಥಾನ, ಕಲ್ಲು ನಾಗದೇವರ ದೇವಸ್ಥಾನ ಮತ್ತು ಸಮೀಪದ ಹೊಲಗಳಲ್ಲಿ ಕಂಡು ಬರುವ ಹುತ್ತಕ್ಕೆ ತೆರಳಿ ಹಾಲೆನೆರೆದು ಪೂಜೆ ಸಲ್ಲಿಸಿ, ನೈವೇದ್ಯವನ್ನು ಅಪರ್ಿಸಿದರು.
ಜೋಳದ ಅಳ್ಳು, ಕುಪ್ಪಸ ದೇವರಿಗೆ ಅಪರ್ಿಸಿ, ಹಾಲೆರೆದು ಭಕ್ತಿಯಿಂದ ನಮಿಸಿದರು. ಮನೆಯಿಂದ ಹುತ್ತದವರೆಗೆ ಹಾಗೂ ಹುತ್ತದಿಂದ ಮನೆವರೆಗೆ ಜೋಳದ ಅಳ್ಳನ್ನು ಚೆಲ್ಲುತ್ತ ಸಾಗಿ, ಸಾಂಪ್ರದಾಯಿಕವಾಗಿ ನಾಗರ ಪಂಚಮಿ ಹಬ್ಬದ ಆಚರಣೆಯನ್ನು ಮಾಡಲಾಯಿತು.
ಎಲ್ಲೆಡೆ ತವರಿಗೆ ಬಂದಿರುವ ಮಹಿಳೆಯರು ಹೊಸ ಬಟ್ಟೆ ತೊಟ್ಟು, ಅಳ್ಳು, ರವೆಯುಂಡೆ, ಅಳ್ಳಿಟ್ಟು, ಹುರಿದ ಶೇಂಗಾ, ಕಡಲೆ ಹಾಗೂ ಹೋಳಿಗೆಯ ಸಿಹಿ ಖಾದ್ಯಗಳನ್ನು ಸವಿದರು. ಮಧ್ಯಾಹ್ನದ ನಂತರ ಮಹಿಳೆಯರು, ಮಕ್ಕಳು, ಯುವಕರು ಜೋಕಾಲಿಯಾಡಿ ಖುಷಿ ಪಟ್ಟು ಸಂಭ್ರಮಿಸಿ, ಅತ್ಯಂತ ಸಡಗರದಿಂದ ನಾಗರ ಪಂಚಮಿ ಹಬ್ಬವನ್ನು ಆಚರಣೆ ಮಾಡಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 