ವಿಶ್ವ ಪರಿಸರ ದಿನಾಚರಣೆ: ಗಿಡಮರಗಳ ಸಂರಕ್ಷಣೆಗೆ ಕರೆ

ವಿಶ್ವ ಪರಿಸರ ದಿನಾಚರಣೆ: ಗಿಡಮರಗಳ ಸಂರಕ್ಷಣೆಗೆ ಕರೆ World Environment Day: Call to protect trees

ಸವದತ್ತಿ 06 : ಪರಿಸರ ಸಂರಕ್ಷಣೆ ಇಂದಿನ ದಿನಗಳಲ್ಲಿ ಅತ್ಯಂತ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಗಿಡಮರಗಳನ್ನು ಬೆಳೆಸುವ ಮೂಲಕ ಪರಿಸರದ ಸಮತೋಲನವನ್ನು ಕಾಪಾಡಿಕೊಳ್ಳಬೇಕು" ಎಂದು ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ಕರೆ ನೀಡಿದರು.ಪಟ್ಟಣದ ಕೆ.ಎಲ್‌.ಇ ಸಂಸ್ಥೆಯ ಎಸ್‌.ವಿ.ಎಸ್‌. ಬೆಳ್ಳುಳ್ಳಿ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಸಿಗಳಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

 ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಮರಗಿಡಗಳು ನಮಗೆ ಜೀವವಾಯು ಮತ್ತು ನೆರಳು ನೀಡುವ ಮೂಲಕ ಜೀವನಾಧಾರವಾಗಿವೆ. ಮರಗಳಿದ್ದರೆ ಮಾತ್ರ ಸಕಾಲದಲ್ಲಿ ಮಳೆ ಬರುತ್ತದೆ, ಹವಾಮಾನದಲ್ಲಿ ಸಮತೋಲನವಿರುತ್ತದೆ. ಆದ್ದರಿಂದ ಪರಿಸರದ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಇಂದಿನ ಯುವಜನತೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು.

ಕೇವಲ ಸಸಿಗಳನ್ನು ನೆಡುವುದಷ್ಟೇ ಅಲ್ಲದೆ, ಅವುಗಳನ್ನು ಪೋಷಿಸಿ ಬೆಳೆಸುವ ಮೂಲಕ ಮಾದರಿಯಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ರಾಜಶೇಖರ ನಿಡವಣಿ, ಉದಯ ಹುರಳಿ, ಬಸವರಾಜ ಪುಟ್ಟಿ, ಮಲ್ಲಿಕಾರ್ಜುನ ಬೀಳಗಿ, ಶಿವಾನಂದ ಬೆಲ್ಲದ, ವಿರೂಪಾಕ್ಷ ಸುತಗಟ್ಟಿ, ಪ್ರಭುಲಿಂಗೇಶ್ವರ  ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಸಿಬ್ಬಂದಿ ವರ್ಗದವರು, ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.