ಕಥಕ್ ನೃತ್ಯ ಪ್ರದರ್ಶನದಲ್ಲಿ, ರಾಷ್ಟ್ರ ಮಟ್ಟದ ದ್ವಿತೀಯ ಪುರಸ್ಕಾರಕ್ಕೆ ಭಾಜನ
ಧಾರವಾಡ: ಜೂ.03: ಯುನೆಸ್ಕೋ ಸಹಕಾರದಲ್ಲಿ, ಅಖಿಲ ಭಾರತೀಯ ಸಾಂಸ್ಕೃತಿಕ ಸಂಘ, ಮಹಾರಾಷ್ಟ್ರದ ಪುಣೆಯಲ್ಲಿ ಆಯೋಜಿಸಿದ್ದ (01 ಜೂನ್, 2025 ಭಾನುವಾರ) 2025ನೇ ಸಾಲಿನ, 21ನೇ ಪ್ರದರ್ಶಕಗಳ ಕಲೆಗಳ ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಧಾರವಾಡದ ಕುಮಾರಿ ಆರೋಹಿ ಸದಾಶಿವ ಐಹೊಳ್ಳಿ ಕಥಕ್ ನೃತ್ಯ ಪ್ರದರ್ಶನದಲ್ಲಿ, ರಾಷ್ಟ್ರ ಮಟ್ಟದ ದ್ವಿತೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಅಕ್ಟೋಬರ್ 25 ರಿಂದ 29ರ ವರೆಗೆ, ಥೈಲ್ಯಾಂಡ್ನ ಪಟ್ಟಾಯಾದಲ್ಲಿ, ಬುರಾಫಾ ವಿಶ್ವವಿದ್ಯಾಲಯದ, ಕಲೆ ಹಾಗೂ ಸಂಸ್ಕೃತಿ ಕೇಂದ್ರದಲ್ಲಿ ಆಯೋಜಿತ, 15ನೇ ಕಲ್ಚರಲ್ ಒಲಿಂಪಿಯಾಡ್ ಫಾರ್ ಆರ್ಟ್ ಆಂಡ್ ಕಲ್ಚರ್, ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆರೋಹಿ ಆಯ್ಕೆಯಾಗಿದ್ದು, ಕಥಕ್ ನೃತ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ಪ್ರದರ್ಶನ ನೀಡಲಿದ್ದಾರೆ.
ಶ್ರೀ ಸತ್ಯ ಸಾಯಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ, ಪಿಯೂಸಿ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದಲ್ಲಿ, ವ್ಯಾಸಂಗ ನಿರತ ಆರೋಹಿ, ಶಾಂತಲಾ ನೃತ್ಯಾಲಯದ, ನೃತ್ಯ ಗುರು ವಿದುಷಿ ವಿಜೇತಾ ವೇರ್ಣೇಕರ ಅವರಲ್ಲಿ, ಕಳೆದ 11 ವರ್ಷಗಳಿಂದ, ಭರತನಾಟ್ಯ ಹಾಗೂ ಕಥಕ್ ನೃತ್ಯಾಭ್ಯಾಸದಲ್ಲಿ ತೊಡಗಿದ್ದು, ರಾಷ್ಟ್ರೀಯ ನೃತ್ಯ ಪರೀಕ್ಷೆಗಳನ್ನು, ಉನ್ನತ ಶ್ರೇಣಿಯಲ್ಲಿ, ಉತ್ತೀರ್ಣರಾಗಿದ್ದಾರೆ.
ಧಾರವಾಡ ಆಕಾಶವಾಣಿಯ ಉನ್ನತ ಶ್ರೇಣಿಯ ಗಾಯಕ ಹಾಗೂ ನಿಲಯ ಕಲಾವಿದರಾದ, ಪಂ. ಸದಾಶಿವ ಐಹೊಳ್ಳಿ ಅವರ ಕಿರಿಯ ಪುತ್ರಿಯಾಗಿದ್ದು, ಸುಗಮ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತ ಅಧ್ಯಯನ ನಿರತರಾಗಿದ್ದಾರೆ.
ಶಾಂತಲಾ ನೃತ್ಯಾಲಯ, ಶ್ರೀ ಸತ್ಯ ಸಾಯಿ ಪದವಿ ಪೂರ್ವ ಮಹಾವಿದ್ಯಾಲಯದ ಗುರುವೃಂದ ಹಾಗೂ ಆಕಾಶವಾಣಿ ಅಧಿಕಾರಿ ವರ್ಗ, ಆರೋಹಿ ಐಹೊಳ್ಳಿ ಅವರನ್ನು ಅಭಿನಂದಿಸಿದೆ.
ಆಯೋಜಿಸಿದ್ದ (01 ಜೂನ್, 2025 ಭಾನುವಾರ) 2025ನೇ ಸಾಲಿನ, 21ನೇ ಪ್ರದರ್ಶಕಗಳ ಕಲೆಗಳ ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಧಾರವಾಡದ ಆರೋಹಿ ಸದಾಶಿವ ಐಹೊಳ್ಳಿ ಕಥಕ್ ನೃತ್ಯ ಪ್ರದರ್ಶಿಸಿ, ರಾಷ್ಟ್ರ ಮಟ್ಟದ ದ್ವಿತೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.