ಕೋಮಲಾ ಕುದುರಿಮೋತಿ ಗೆ ಸನ್ಮಾನ
ಕೊಪ್ಪಳ 14: ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷರಾಗಿರುವ ಕೋಮಲಾ ಕುದುರಿಮೋತಿ ಯವರಿಗೆ ಇತ್ತೀಚಿಗೆ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ಲಭಿಸಿರುವುದಕ್ಕೆ ಕೊಪ್ಪಳದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರಿನ ಕೃಷಿ ತಜ್ಞ ಕೃಷ್ಣಪ್ಪಗೌಡ ಪದ್ಡಂಬೈಲ್ ಹಾಗೂ ಕುಡ್ಲ ತುಳು ಚಾನಲ್ ನ ವಾರ್ತಾ ವಾಚಕಿ ಡಾ, ಪ್ರಿಯಾ ಹರೀಶ್, ಸಂಗೀತ ಕಲಾವಿದೆ ಅನ್ನಪೂರ್ಣಮ್ಮ ಮನ್ನಾಪುರ ಹಿರಿಯ ಪತ್ರಕರ್ತ ಸಾಧಿಕ್ ಅಲಿ ಸೇರಿದಂತೆ ಅನೇಕ ಮಹಿಳೆಯರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.