ಗುರು ಪರಂಪರೆ ಭಾರತೀಯ ಸಂಸ್ಕೃತಿಯ ತಿರುಳು: ಡಾ.ಅಜಿತ ಪ್ರಸಾದ
ಧಾರವಾಡ 16; ಇತ್ತೀಚಿನ ದಿನಗಳಲ್ಲಿ ಗುರು ಶಿಷ್ಯರ ಸಂಬಂಧಗಳು ಕದಡಿ ಹೋಗುತ್ತಿದ್ದು ಆಧುನಿಕ ಯುಗದಲ್ಲಿ ಶಿಕ್ಷಕರಿಲ್ಲದೇ ತಂತ್ರಜ್ಞಾನದ ಮುಖಾಂತರ ಜ್ಞಾನ ಸಂಪಾದನೆ ಸಾಧ್ಯವಾಗಿದೆ. ಆದರೆ ವಿದ್ಯಾಥರ್ಿಗಳಿಗೆ ತಾಳ್ಮೆ, ಸಹನೆ, ಭಕ್ತಿ ಗೌರವ ಇವುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಕೇವಲ ಗುರುಕುಲದಲ್ಲಿ ಕಲಿತ ಹಲವಾರು ವಿದ್ವಾನರು ನಮಗೆ ಗೋಚರಿಸುತ್ತಾರೆ. ಆದರೆ ಬೆರಳ ತುದಿಯಲ್ಲಿಯೇ ಸಮಗ್ರ ಜ್ಞಾನದ ಕಣಜವಿದ್ದರೂ ಆತಂಕವಾದ ಮಾದಕ ವಸ್ತುಗಳ ಸೇವನೆ ಮುಂತಾದವುಗಳು ಮಿತಿ ಮೀರಿ ನಡೆಯುತ್ತಿರುವದಕ್ಕೆ ಗುರುಗಳ ಮಾರ್ಗದರ್ಶನವಿಲ್ಲದಿರುವುದೇ ಕಾರಣ ಎಂದು ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಹೇಳಿದರು.
ಜೆ.ಎಸ್.ಎಸ್ ಮಂಜುನಾಥೇಶ್ವರ ಸಿ.ಬಿ.ಎಸ್.ಸಿ ಶಾಲೆಯಲ್ಲಿ ಆಯೋಜಿಸಿದ್ದ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿಯ ವಿವಿಧ ಮಜಲುಗಳ ಸನ್ನಿವೇಶಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗುರುವೆಂದರೆ ಕೇವಲ ಪಾಠ ಹೇಳುವ ಯಂತ್ರವಲ್ಲ, ಜೀವನವನ್ನು ರೂಪಗೊಳಿಸುವ ಚೇತನ ಶಕ್ತಿ ಎಂದು ಹೇಳಿದರು.
ಆಶ್ರಮ, ಯಜ್ಞಕುಂಡ, ಪಾಠಶಾಲೆ, ಉದ್ಯಾನವನ, ನೀರಿನ ಹೊಂಡ ನೋಡುಗರ ಕಣ್ಮನ ಸೆಳೆಯುವಂತಿದ್ದವು. ಇದೇ ಸಂದರ್ಭದಲ್ಲಿ ಶಾಲೆಯವತಿಯಿಂದ ಡಾ. ಅಜಿತ ಪ್ರಸಾದರವರನ್ನು ಪ್ರಾಚಾರ್ಯರಾದ ಸಾಧನಾ ಸನ್ಮಾನಿಸಿದರು. ಮಹಾವೀರ ಉಪಾದ್ಯೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 