ವೃತ್ತಿಯಿಂದ ನಿವೃತ್ತಿ ಅನಿವಾರ್ಯ: ಜಹಗಿರ್ದಾರ
Retirement from profession inevitable: Jahagirdara
ಧಾರವಾಡ 02: ವೃತ್ತಿಯಿಂದ ನಿವೃತ್ತಿ ಅನಿವಾರ್ಯ, ನಿವೃತ್ತಿಯವರೆಗೆ ದುಡಿಮೆ ಅನಿವಾರ್ಯ, ಡಾ. ನಾಗರಾಜ ಗುದಗನವರ ನಿಷ್ಠೆ ಮತ್ತು ಪ್ರೀತಿಯಿಂದ ನಿಸ್ವಾರ್ಥ ಸೇವೆಯನ್ನು ನಮ್ಮ ಸಂಸ್ಥೆಗೆ ನೀಡಿದ್ದಾರೆ. ಅವರಿಗೆ ನಿವೃತ್ತಿ ಜೀವನದಲ್ಲಿ ದೇವರು ಆರೋಗ್ಯ ಮತ್ತು ನೆಮ್ಮದಿಯನ್ನು ನೀಡಲಿ ಎಂದು ಅಂಜುಮನ್ ಏ ಸಂಸ್ಥೆಯ ಉಪಾಧ್ಯಕ್ಷ ಬಶೀರ್ ಅಹ್ಮದ್ ಎ ಜಹಗಿರ್ದಾರ ಶುಭ ಹಾರೈಸಿದರು.
ಅಂಜುಮನ್ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ಗುದಗನವರ ಮತ್ತು ಹೆಚ್ ಕೆ ನಾಯಕವಾಡಿ ಜುಲೈ 31ರಂದು ಸೇವಾ ನಿವೃತ್ತಿರಾದ ನಿಮಿತ್ಯ ಅಂಜುಮನ್ ಸಂಸ್ಥೆ ವತಿಯಿಂದ ಸನ್ಮಾನಿಸಿ ಮಾತನಾಡಿ ಅವರಿಬ್ಬರ ಸೇವೆ ಗಮನಾರ್ವಾಗಿದೆ ಎಂದು ಶ್ಲಾಘಿಸಿದರು.
ಪ್ರಾಚಾರ್ಯ ಡಾ. ಐ ಎ ಮುಲ್ಲಾ ಮುಂದಿನ ಜೀವನ ನೆಮ್ಮದಿಯಿಂದ ಕೂಡಿರಲಿ ಎಂದು ಹೇಳಿದರು. ಡಾ. ಎ ಎಸ್ ಬಳ್ಳಾರಿ, ಡಾ. ರುದ್ರೇಶ್ ಮೇಟಿ, ಪ್ರೊ.ನಾಗರಾಜ ಕನಕಣಿ, ರಜಿಯಾ ತಹಸೀಲ್ದಾರ್ ಅವರು ಸೇವಾ ನಿವೃತ್ತಿಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾಲೇಜಿನ ಆಡಳಿತ ಮಂಡಳಿಯ ರಫೀಕ ಶಿರಹಟ್ಟಿ, ಕೈರುದ್ದೀನ್ ಶೇಕ್, ಅಬ್ದುಲ್ ಅಜೀಜ್ ಬಡ್ಬಡೇ, ನನ್ನೇ ಸಾಬಣ್ಣವರ್, ಖಲಿಲ ದಾಸನಕೊಪ್, ಡಾ ಶಿವಾನಂದ ಶೆಟ್ಟರ್, ಪ್ರೊ. ಡಿ ಎಮ್ ನಿಡವನಿ, ಡಾ ಎನ್ ಎಮ್ ಮಕಂದಾರ್, ರೇಣುಕಾ ಗುದಗನವರ, ಸುರೇಶ ಗುದಗನವರ, ಡಾ ರತ್ನಾ ಕಡಪಟ್ಟಿ, ಡಾ ರಾಜಶ್ರೀ ಗುದಗನವರ, ಶಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಡಾ ಸೌಭಾಗ್ಯ ಜಾದವ್ ಸ್ವಾಗತಿಸಿದರು. ಡಾ ಗೌರಿ ಕೇರಿಮಠ ಪರಿಚಸಿದರು. ಡಾ ಬೀಬಿ ಆಯುಷಾ ಚಕೋಲಿ ವಂದಿಸಿದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 