ನಿಮ್ಮ ಸುರಕ್ಷತೆಗಾಗಿ ನಮ್ಮ ತಂದೆ-ತಾಯಿ ಕರ್ತವ್ಯದಲ್ಲಿದ್ದಾರೆ: ಪೊಲೀಸರ ಮಕ್ಕಳ ಮನವಿ
ಬೆಂಗಳೂರು,
ಮಾ.29, ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಈಗಾಗಲೇ ದೇಶವನ್ನೇ
ಲಾಕ್ಡೌನ್ ಮಾಡಲಾಗಿದ್ದು, ಮನೆಯಿಂದ ಯಾರೊಬ್ಬರೂ ಹೊರ ಬರದಂತೆ ಪೊಲೀಸರು ಮನವಿ
ಮಾಡುತ್ತಿದ್ದಾರೆ.ಆದರೆ, ಕೆಲವರು ಲಾಕ್ ಡೌನ್ ಆದೇಶಕ್ಕಾಗಲೀ, ಪೊಲೀಸರ ಮಾತಿಗೂ ಕಿವಿಗೊಡದೆ ಅನಾವಶ್ಯಕವಾಗಿ ರಸ್ತೆಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ತಮ್ಮ
ಆರೋಗ್ಯವನ್ನು ಬದಿಗಿಟ್ಟು ಕಾರ್ಯನಿರ್ವಹಿಸಲೇ ಬೇಕು. ಆದ್ದರಿಂದ ಜನತೆ ಇದನ್ನು
ಅರಿತುಕೊಂಡು ಲಾಕ್ಡೌನ್ಗೆ ಸಹಕರಿಸಬೇಕು ಎಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.ಪೊಲೀಸರು
ಮನೆಯಿಂದ ಹೊರಗೆ ಬಂದು ಕಾರ್ಯನಿರ್ವಹಿಸಬೇಕಾಗಿರುವುದರಿಂದ ಮನೆಗೆ ಹೋದ ನಂತರ
ಕುಟುಂಬಸ್ಥರಿಂದ ದೂರವೇ ಉಳಿಯುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಸಂಚಾರ ವಿಭಾಗದ ಜಂಟಿ
ಪೊಲೀಸ್ ಆಯುಕ್ತ ರವಿಕಾಂತೇಗೌಡ ಬಹಿರಂಗಪಡಿಸಿದ್ದಾರೆ.ದಯವಿಟ್ಟು ಮನೆಯಿಂದ ಹೊರಬರದೆ ನಮಗೆ ಸಹಕರಿಸಿ ಎಂದು ವಿನಂತಿಸಿಕೊಂಡಿದ್ದಾರೆ.ನಿಮ್ಮ
ಸುರಕ್ಷತೆಗಾಗಿ ನಮ್ಮ ತಂದೆ ತಾಯಿ ಹೊರಗೆ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮನೆಗೆ ಬಂದಾಗಲೂ ನಾನು ಅವರ ಸಮೀಪ ನಮಗೆ ತೆರಳಲು ಆಗುತ್ತಿಲ್ಲ. ದಯವಿಟ್ಟು ಮನೆಯಲ್ಲೇ
ಇದ್ದು ಸಹಕರಿಸಿ ಎಂದು ಪೊಲೀಸರ ಮಕ್ಕಳು ಸಾರ್ವಜನಿಕರಲ್ಲಿ ಮನವಿ ಮಾಡುವ
ಸಂದೇಶವೊಂದನ್ನು ಅವರು ಹಂಚಿಕೊಂಡಿದ್ದಾರೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 