ಆರ್ಬಿಐ ಕ್ರಮಗಳಿಂದ ಮಧ್ಯಮ ವರ್ಗ ಮತ್ತು ವಾಣಿಜ್ಯ-ವಹಿವಾಟುಗಳಿಗೆ ಪ್ರಯೋಜನಕರ-ಪ್ರಧಾನಿ ಮೋದಿ
ನವದೆಹಲಿ,
ಮಾರ್ಚ್ 27 ,ರೆಪೊ ದರ ಕಡಿತ, ಸಾಲಗಳ ಇಎಂಐ ಪಾವತಿ ಮುಂದೂಡಿಕೆ ಮತ್ತು ಹಣ
ಪ್ರಸರಣ ಹೆಚ್ಚಿಸಲು ರಿಸರ್ವ್ ಬ್ಯಾಂಕ್ ತೆಗೆದುಕೊಂಡಿರುವ ನಿರ್ಧಾರವನ್ನು
ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಕ್ರಮಗಳು ಮಾರುಕಟ್ಟೆಯಲ್ಲಿ ಹಣ
ಪ್ರಸರಣವನ್ನು ಹೆಚ್ಚಿಸುವುದಲ್ಲದೆ ಮಧ್ಯಮ ವರ್ಗ ಮತ್ತು ವಾಣಿಜ್ಯ-ವಹಿವಾಟುಗಳಿಗೆ
ನೆರವಾಗಲಿವೆ ಎಂದು ಹೇಳಿದ್ದಾರೆ. ಕರೋನವೈರಸ್ ಪರಿಣಾಮದಿಂದ ದೇಶದ ಆರ್ಥಿಕತೆ
ಕಾಪಾಡಲು ಆರ್ಬಿಐ ದಿಟ್ಟ ಮತ್ತು ಮಹಾ ಕ್ರಮಗಳನ್ನು ಕೈಗೊಂಡಿದೆ. ಈ ಕ್ರಮಗಳಿಂದ ಹಣ
ಪ್ರಸರಣ ಸುಧಾರಿಸುತ್ತದೆಯಲ್ಲದೆ ನಿಧಿಯ ವೆಚ್ಚವನ್ನು ಕಡಿಮೆ ಮಾಡುತ್ತದೆ. ಅಲ್ಲದೆ,
ಮಧ್ಯಮ ವರ್ಗ ಮತ್ತು ವಾಣಿಜ್ಯ-ವಹಿವಾಟುಗಳಿಗೆ ಸಹಕಾರಿಯಾಗಲಿದೆ ಎಂದು ಪ್ರಧಾನಿ ಟ್ವೀಟ್
ಮಾಡಿದ್ದಾರೆ.ಕೊವಿದ್ -19 ನಿಂದ ಉಂಟಾಗುವ ನಷ್ಟವನ್ನು ತಗ್ಗಿಸುವ ಉದ್ದೇಶದಿಂದ
ಆರ್ಬಿಐ ಶುಕ್ರವಾರ ಹಲವಾರು ಕ್ರಮಗಳನ್ನು ಪ್ರಕಟಿಸಿದೆ.ರೆಪೊ ದರವನ್ನು 75 ಮೂಲಾಂಕ
ತಗ್ಗಿಸಿ ಶೇ 4.4 ಕ್ಕೆ ಇಳಿಸಿರುವುದು ಇವುಗಳಲ್ಲಿ ಪ್ರಮುಖವಾಗಿದೆ.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 