ಬಿಜೆಪಿ- ಶಿವಸೇನೆ ಶೀಘ್ರ ಒಂದುಗೂಡಲಿವೆ ಎಂಬ ಮನೋಹರ್ ಜೋಷಿ ಹೇಳಿಕೆ, ನಿರಾಕರಿಸಿದ ಪಕ್ಷ
ಮುಂಬೈ, ಡಿ 11: ಬಿಜೆಪಿ ಹಾಗೂ ಶಿವಸೇನೆ ನಡುವೆ ಮರು ಮೈತ್ರಿ ಕುರಿತು ಪಕ್ಷದ ಹಿರಿಯ ನಾಯಕ ಮನೋಹರ್ ಜೋಷಿ ಅವರು ನೀಡಿರುವ ಹೇಳಿಕೆ ಶಿವಸೇನೆಯ ಅಧಿಕೃತ ನಿಲುವಲ್ಲ, ಅದು ಅವರ ವ್ಯಕ್ತಿಗತ ಹೇಳಿಕೆ ಎಂದು ಶಿವಸೇನೆ ಬುಧವಾರ ಸ್ಪಷ್ಟನೆ ನೀಡಿದೆ.
ಮಾಜಿ ಮುಖ್ಯಮಂತ್ರಿಯೂ ಆಗಿರುವ ಪಕ್ಷದ ಹಿರಿಯ ನಾಯಕ ಮನೋಹರ್ ಜೋಷಿ, ಶೀಘ್ರದಲ್ಲಿಯೇ ಬಿಜೆಪಿ ಹಾಗೂ ಶಿವಸೇನೆ ಒಂದು ಗೂಡಲಿವೆ ಎಂದು ಮಂಗಳವಾರ ಹೇಳಿದ್ದರು.
ಈ ನಡುವೆ ಶಿವಸೇನೆ ಹಿರಿಯ ನಾಯಕ ನೀಲಂ ಗೋರೆ ಬುಧವಾರ ಹೇಳಿಕೆ ನೀಡಿ, ಶಿವಸೇನೆ ಮತ್ತು ಬಿಜೆಪಿ ಸದ್ಯದಲ್ಲೇ ಒಂದುಗೂಡಲಿವೆ ಎಂಬ ಹಿರಿಯ ನಾಯಕ ಮನೋಹರ್ ಜೋಷಿ ನೀಡಿರುವ ಹೇಳಿಕೆ ಅವರ ವ್ಯಕ್ತಿಗತವಾದ ಹೇಳಿಕೆ, ಅದು ಶಿವಸೇನೆಯ ಅಧಿಕೃತ ನಿಲುವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ತಲೆಮಾರಿನ ನಾಯಕರಲ್ಲಿ ಇಂತಹ ಭಾವನೆಗಳು ಮೂಡುವುದು ಸ್ವಾಭಾವಿಕ ಎಂದು ಗೋರೆ ಹೇಳಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 