ಮಹಾಲಿಂಗಪೂರ: ರಸ್ತೆ ದುರಸ್ಥಿ ಮಹಿಳೆಯರಿಂದ ಆಕ್ರೋಶ
ಲೋಕದರ್ಶನ ವರದಿ
ಮಹಾಲಿಂಗಪೂರ 06: ಯಾರ ಹೊಟ್ಟೆ ಕಡಿಯುತ್ತೋ ಅವರೆ ಅಜವಾನ ತಿನಬೇಕು ಎನ್ನುವ ಹಿರಿಯರ ಅನುಭವದ ಮಾತೋಂದು ಪದೆ ಪದೆ ಕೇಳುತ್ತೇವೆ.
ಮಹಿಳೆಯರು ಕೈ ಮಾಡಿ ತೋರಿಸುತ್ತಿರುವುದು ಎನನ್ನೋ ತೋರಿಸುತ್ತಿದ್ದಾರೆಂದೂ ಅಂದುಕ್ಕೊಳ್ಳಬೇಡಿ, ಹೆಣ್ಣಿಗೆ ಆಗುವ ನೋವು ಹೆಣ್ಣಿಗೆ ಗೊತ್ತು.
ಪಟ್ಟಣದ ಆರೋಗ್ಯ ಸಮುದಾಯಕ್ಕೆ ಹೋಗುವ ದಾರಿಯ ದುಸ್ಥಿತಿಯನ್ನು ಸ್ಥಳೀಯ ಮಹಿಳೆಯರು ತೋರಿಸುತಿದ್ದಾರೆ.
ರೋಗಿಗಳು, ಬಸಿರು ಹೆಂಗಸರು, ಹಡೆದ ಬಾನಂತಿಯರು, ಅಂಗವಿಕಲರು, ಆಪರೇಷನ್ ಗೆ ಒಳಗಾದವರು ಟಮ್-ಟಮ್ ಗಾಡಿ, ಬೈಕ್ ಮುಖಾಂತರ, ಮತ್ತು ಅಟೋರಿಕ್ಷಾಗಳಲ್ಲಿ ಸರಕಾರಿ ದವಾಖಾನೆಗೆ ಈ ದಾರಿಯ ಮೂಲಕ ಹೋಗುತ್ತೇನೆ ಎಂದರೆ ಆಗುವ ನರಕಯಾತನೆ ಶತ್ರುವಿಗೂ ಬೇಡ ಎನ್ನುತ್ತಾರೆ ಮಹಿಳೆಯರು.
ಈ ರಸ್ತೆಯು ಕೆಟ್ಟು ಹೋಗಿ ಹಲವು ವರ್ಷಗಳೆ ಕಳೆದಿವೆ. ದುರುಸ್ಥಿ ಭಾಗ್ಯ ಮಾತ್ರ ಬಡ ಜನರ ಪಾಲಿಗೆ ಮರಿಕೆಯಾಗಿದೆ.ಬೇಗನೆ ದುರುಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಪ್ರಭು ಮಲಾಬಾದಿ ಹಾಗೂ ಕುಮಾರ್ ಮಾಂಗ ಆಗ್ರಹಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 